Advertisement

ಚಿತ್ರ ವಿತರಕ ನಾಗಪ್ರಸಾದ್‌ ವಿಧಿವಶ

06:52 AM Jan 07, 2019 | Team Udayavani |

ಬೆಂಗಳೂರು: ಹಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಕನ್ನಡ ಚಿತ್ರರಂಗದ ವಿತರಕ ನಾಗಪ್ರಸಾದ್‌ ಭಾನುವಾರ ಕೊನೆಯುಸಿರೆಳೆದಿದ್ದಾರೆ. 

Advertisement

ಸುದೀಪ್‌ ನಾಯಕರಾಗಿ ನಟಿಸಿರುವ ವಿಷ್ಣುವರ್ಧನ ಸಿನಿಮಾ ಮೂಲಕ ಚಿತ್ರರಂಗಕ್ಕೆ ವಿತರಕರಾಗಿ ಬಂದ ಪ್ರಸಾದ್‌, ಆ ನಂತರ “ಚಿಂಗಾರಿ’, “ಗಾಡ್‌ ಫಾದರ್‌’, “ರಜನಿಕಾಂತ’ ಸೇರಿದಂತೆ ಹಲವು ಸಿನಿಮಾಗಳ ವಿತರಣೆ  ಮಾಡಿದ್ದಾರೆ. ಜತೆಗೆ ಹಲವು ಸಿನಿಮಾಗಳ ನಿರ್ಮಾಣಕ್ಕೆ ಸಹಭಾಗಿತ್ವ ಪಡೆದಿದ್ದರು. ನಾಗಪ್ರಸಾದ್‌ ಅವರ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next