Advertisement
ಬಾದಾಮಿ ತಹಶೀಲ್ದಾರ್ ಕಚೇರಿಯಲ್ಲಿ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಯಾವುದೇ ಲೆಕ್ಕಾಚಾರ ಹಾಕಿ ರಾಜಕಾರಣ ಮಾಡುವ ವ್ಯಕ್ತಿಗಳಲ್ಲ. ಬಾದಾಮಿ ಕ್ಷೇತ್ರ ಮೊದಲಿನಿಂದಲೂ ಬಿಜೆಪಿಗೆ ಗಟ್ಟಿ ನೆಲ. ಬಾದಾಮಿ ಬನಶಂಕರಿ ದೇವಿಯ ಆಶೀರ್ವಾದದ ಜತೆಗೆ ಎಲ್ಲರ ಆಶೀರ್ವಾದದಿಂದ ಬಿಜೆಪಿ ಗೆಲುವು ಸಾಧಿಸಲಿದೆ. ಬಾದಾಮಿ ಕ್ಷೇತ್ರದಲ್ಲಿ ಇದೊಂದು ಮಹಾ ಯುದಟಛಿ. ಈ ಯುದ್ಧದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
● ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಸಿಎಂಗೆ ಬಾದಾಮಿನೂ ಸಿಗಲ್ಲ, ಗೋಡಂಬಿನೂ ಇಲ್ಲ: ಶೆಟ್ಟರ್
ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಭೀತಿಯಿಂದ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ಬಾದಾಮಿ ಹುಡುಕಲು ಅವರು ಬಂದಿದ್ದು, ಅವರಿಗೆ ಬಾದಾಮಿನೂ ಸಿಗಲ್ಲ. ಗೋಡಂಬಿನೂ ಸಿಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಒಬ್ಬ ಪಲಾಯನವಾದಿ. ಮೈಸೂರಿನಲ್ಲಿ ಸೋಲುವ ಭಯದಿಂದ ಬಾದಾಮಿಗೆ ಬಂದಿದ್ದಾರೆ. ಅವರಿಗೆ ಅಲ್ಲಿ ಚಾಮುಂಡೇಶ್ವರಿ ಮತ್ತು ಇಲ್ಲಿ ಬನಶಂಕರಿ ಆಶೀರ್ವಾದ ಸಿಗಲ್ಲ. ಬಾದಾಮಿ ಹುಡುಕಲು ಬಂದಿರುವ ಸಿಎಂಗೆ ಇಲ್ಲಿ ಬಾದಾಮಿ, ದ್ರಾಕ್ಷಿ, ಗೋಡಂಬಿ ಯಾವುದೂ ಸಿಗಲ್ಲ. ಸಿಎಂಗೆ ಈ ಚುನಾವಣೆ ಅಧೋಗತಿ ಎಂಬುದು ಅವರೇ ತಿಳಿದುಕೊಳ್ಳಬೇಕು ಎಂದರು.
Related Articles
● ಪ್ರಕಾಶ ಜಾವಡೇಕರ್, ಕೇಂದ್ರ ಸಚಿವ
Advertisement