Advertisement

ದೆಹಲಿ: ರೈಲಿನಲ್ಲಿ ಸೀಟಿಗಾಗಿ ಜಗಳ; ಓರ್ವನ ಹತ್ಯೆ!

12:06 PM Aug 13, 2017 | Team Udayavani |

 ಹೊಸದಿಲ್ಲಿ : ಆಗ್ರಾ -ಹೊಸದಿಲ್ಲಿ ಇಂಟರ್‌ಸಿಟಿ ರೈಲಿನಲ್ಲಿ  ಶನಿವಾರ ರಾತ್ರಿ ಸೀಟಿಗಾಗಿ ಭಾರೀ ಜಗಳವೇ ನಡೆದಿದ್ದು , ಓರ್ವನ ಸಾವಿನಲ್ಲಿ ಅಂತ್ಯಗೊಂಡಿದೆ.

Advertisement

ಸೀಟು ಹಂಚಿಕೊಳ್ಳುವ ವಿಚಾರದಲ್ಲಿ ಜಗಳ ಆರಂಭವಾಗಿದ್ದು ಹೊಡೆದಾಟ ಶುರುವಾಗಿದೆ. ಈ ವೇಳೆ ಕಿಡಿಗೇಡಿಗಳು ಇಬ್ಬರನ್ನು  ಚಲಿಸುತ್ತಿರುವಾಗಲೇ ರೈಲಿನಿಂನ ಕೆಳಗೆ ದೂಡಿದ್ದಾರೆ. ಪರಿಣಾಮ ಓರ್ವ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಘಟನೆ ಹರಿಯಾಣದ ಅಸೋಟಿ ಬಳಿ ನಡೆದಿದ್ದು, ಇದು ಕೋಮು ವಿಚಾರಕ್ಕೆ ನಡೆದಿರುವ ಜಗಳವಲ್ಲ ಎಂದು ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು ತಿಳಿಸಿದ್ದಾರೆ.

ಇದೇ ಮಾರ್ಗದಲ್ಲಿ  ಗೋಮಾಂಸ ಸಾಗಾಟ ವಿಚಾರಕ್ಕೆ ಸಂಬಂಧಿಸಿ ಗುಂಪು ದಾಳಿ ನಡೆಸಿ ಜುನೈದ್‌ನನ್ನು ಹತ್ಯೆಗೈದಿತ್ತು ಮತ್ತು ಆತನ ಸಹೋದರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. 

ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳ ಕುರಿತಾಗಲಿ ಮೃತಪಟ್ಟ ಮತ್ತು ಗಾಯಾಳುವಿನ ಕುರಿತು ವಿವರ ಲಭ್ಯವಾಗಿಲ್ಲ. 

Advertisement
Advertisement

Udayavani is now on Telegram. Click here to join our channel and stay updated with the latest news.

Next