Advertisement

Kasaragod ತಂಡಗಳ ಮಧ್ಯೆ ಹೊಡೆದಾಟ ಯುವಕನಿಗೆ ಗಂಭೀರ ಗಾಯ

07:14 PM Jan 13, 2024 | Team Udayavani |

ಕಾಸರಗೋಡು: ನಗರದ ಕೋಟೆಕಣಿಯಲ್ಲಿ ಜ. 12ರಂದು ರಾತ್ರಿ ಎರಡು ತಂಡಗಳ ಮಧ್ಯೆ ಹೊಡೆದಾಟ ನಡೆದಿದ್ದು, ಕೂಡ್ಲು ಮೀಪುಗುರಿ ನಿವಾಸಿ ತೇಜ ಯಾನೆ ಅಜೆಯ್‌ ಕುಮಾರ್‌ (27) ಗಂಭೀರ ಗಾಯಗೊಂಡಿದ್ದಾರೆ. ಈತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಘಟನೆಗೆ ಸಂಬಂಧಿಸಿ ಕಾಸರಗೋಡು ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿ ಸನತ್‌ ಮತ್ತು ವಿಜಿತ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಕಬ್ಬಿಣದ ಸರಳು ಮತ್ತು ಗಾಜಿನಿಂದ ಹೊಡೆದು ತೇಜನಿಗೆ ಗಾಯಗೊಳಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next