Advertisement

ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ-ದಾಳಿ

05:03 PM Aug 25, 2022 | Team Udayavani |

ಲಿಂಗಸುಗೂರು: ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆಂಬ ದೂರುಗಳು ಬಂದ ಪಟ್ಟಣದ ವಿವಿಧ ಕ್ರಿಮಿನಾಶಕ ಹಾಗೂ ರಸಗೊಬ್ಬರ ಅಂಗಡಿಗಳ ಎಸಿ ರಾಹುಲ್‌ ಸಂಕನೂರು ದಾಳಿ ನಡೆಸಿ ಪರಿಶೀಲನೆ ನಡೆಸಿದರು.

Advertisement

ಪಟ್ಟಣದ ವಿವಿಧ ರಸಗೊಬ್ಬರ ಅಂಗಡಿಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡುತ್ತಿರುವ ಬಗ್ಗೆ ರೈತ ಸಂಘ ಹಾಗೂ ರೈತರು ನೀಡಿದ ದೂರಿನ್ವಯ ಸಹಾಯಕ ಆಯುಕ್ತ ರಾಹುಲ್‌ ಸಂಕನೂರು ಹಾಗೂ ಕೃಷಿ ಅಧಿಕಾರಿಗಳು ಪಟ್ಟಣದ ಬಾಲಾಜಿ ಕೃಷಿ ಕೇಂದ್ರ, ವಾಸವಿ ಟ್ರೇಡರ್, ಬಾಲಾಜಿ ಟ್ರೇಡರ್ಸ್‌, ವೈಷ್ಣವಿ ಗೊಬ್ಬರ ಅಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿ ಬೀಳಿ ಚೀಟಿ ವ್ಯವಹಾರ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅಂಗಡಿಗಳ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿ ಮುಂದಿನ ಕ್ರಮ ಜರುಗಿಸುವಂತೆ ಕೃಷಿ ಅಧಿಕಾರಿ ಸಿದ್ದಪ್ಪ ಬಾಚಿಹಾಳ ಅವರಿಗೆ ಸೂಚಿಸಿದರು.

ಈ ವೇಳೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ್‌ ರಾಂಪುರ್‌, ತಾಲೂಕಾಧ್ಯಕ್ಷ ಅಮರೇಶ ಸರ್ಕಾರ್‌, ರವಿಕುಮಾರ ಗೊರೇಬಾಳ, ಅಬ್ಟಾಸ್‌ ಅಲಿ ಗೊರೇಬಾಳ ಹಾಗೂ ಇನ್ನಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next