Advertisement

ಬಿಜೆಪಿಗೆ ಕಾರ್ಯಕರ್ತರೇ ಜೀವಾಳ: ಕೋಟ್ಯಾನ್‌

10:21 AM Jul 26, 2018 | Team Udayavani |

ಹಳೆಯಂಗಡಿ : ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿದ್ದರಿಂದ ಇಂದು ಪಕ್ಷವು ಅವಕಾಶ ನೀಡಿದೆ. ಬಿಜೆಪಿಗೆ ಕಾರ್ಯಕರ್ತರೇ ಜೀವಾಳ,. ಹಗಲಿರುಳು ಶ್ರಮವಹಿಸಿದ್ದರಿಂದ ಕ್ಷೇತ್ರ ದಲ್ಲಿ ಪ್ರಥಮವಾಗಿ ಬಿಜೆಪಿ ಗೆಲುವು ಸಾಧ್ಯವಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು. ಹಳೆಯಂಗಡಿ ಜಾರಂದಾಯ ದೈವಸ್ಥಾನದ ಸಭಾಭವನದಲ್ಲಿ ಬಿಜೆಪಿಯ ಹಳೆಯಂಗಡಿ ಗ್ರಾಮ ಸಮಿತಿ ವತಿಯಿಂದ ನಡೆದ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಮೂಲ್ಕಿ- ಮೂಡಬಿದಿರೆ ಮಂಡಲ ಅಧ್ಯಕ್ಷ ಈಶ್ವರ್‌ ಕಟೀಲ್‌ ಅಧ್ಯಕ್ಷತೆ ವಹಿಸಿದ್ದರು.

Advertisement

ಜಿಲ್ಲಾ ಪಂಚಾಯತ್‌ ಸದಸ್ಯ ವಿನೋದ್‌ಕುಮಾರ್‌ ಬೊಳ್ಳೂರು ಮಾತನಾಡಿ, ಮೂಲ್ಕಿ- ಮೂಡಬಿದಿರೆಯಲ್ಲಿ ಬಿಜೆಪಿ ಪಕ್ಷ ಬಲಗೊಳ್ಳುತ್ತಿದೆ. ಇದರಿಂದ ಈ ಬಾರಿ ಜಯ ಗಳಿಸಲು ಸಾಧ್ಯವಾಗಿದೆ ಎಂದರು. ಈ ಸಂದರ್ಭ ಶಾಸಕರಲ್ಲಿ ಗ್ರಾಮ ಸಮಿತಿಯ ವತಿಯಿಂದ ವಿವಿಧ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲಾಯಿತು.

ತಾ.ಪಂ. ಸದಸ್ಯ ಜೀವನ್‌ ಪ್ರಕಾಶ್‌ ಕಾಮರೊಟ್ಟು, ಕಿನ್ನಿಗೋಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್‌ ಶೆಟ್ಟಿ, ಪಿಸಿಎ ಬ್ಯಾಂಕ್‌ ನ ಅಧ್ಯಕ್ಷ ಎಸ್‌.ಎಸ್‌. ಸತೀಶ್‌ ಭಟ್‌ ಕೊಳುವೈಲು, ನಿರ್ದೇಶಕ ಹಿಮಕರ್‌ ಕದಿಕೆ, ಹಳೆಯಂಗಡಿ ಗ್ರಾ.ಪಂ. ಸದಸ್ಯ ವಿನೋದ್‌ ಕುಮಾರ್‌ ಕೊಳುವೈಲು, ಸುಕೇಶ್‌ ಪಾವಂಜೆ, ಜಿಲ್ಲಾ ಸಮಿತಿಯ ಕೆ.ಭುವನಾಭಿರಾಮ ಉಡುಪ, ದೇವ ಪ್ರಸಾದ ಪುನರೂರು, ಗ್ರಾಮ ಸಮಿತಿಯ ಮನೋಜ್‌ ಹಳೆಯಂಗಡಿ, ಸುನಿಲ್‌ ಪಾವಂಜೆ, ರಾಜೇಶ್‌ ಇಂದಿರಾನಗರ, ಅಶೋಕ್‌ ಸಸಿಹಿತ್ಲು, ಸೂರ್ಯಕಾಂಚನ್‌ ಸಸಿಹಿತ್ಲು, ಡಾ| ನಿಶಾಂಕ್‌, ಗಣೇಶ್‌ ಮತ್ತಿತರರು ಉಪಸ್ಥಿತರಿದ್ದರು. ಗ್ರಾಮ ಸಮಿತಿಯ ಅಧ್ಯಕ್ಷ ನರೇಂದ್ರ ಪ್ರಭು ಸ್ವಾಗತಿಸಿ, ಪ್ರಸ್ತಾವನೆಗೈದರು. 

ನಿರೀಕ್ಷೆಗಳ ಪೂರೈಕೆ
ಕಾರ್ಯಕರ್ತರ ನಿರೀಕ್ಷೆಗಳನ್ನು ಹಂತ-ಹಂತವಾಗಿ ಪೂರೈಸಲಾಗುವುದು. ಈ ವ್ಯಾಪ್ತಿಯಲ್ಲಿ ಅನೇಕ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿದ್ದು ಅದನ್ನು ಮುಂದಿನ ದಿನದಲ್ಲಿ ಸರಿಪಡಿಸಲಾಗುವುದು. 
-ಉಮಾನಾಥ ಕೋಟ್ಯಾನ್‌
ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next