Advertisement

ಚರಂಡಿಯಿಲ್ಲದೆ ಮನೆಗಳಿಗೆ ನೀರು ನುಗ್ಗುವ ಭೀತಿ!

11:31 AM Jun 02, 2018 | Team Udayavani |

ಮಹಾನಗರ : ನಗರದ ದೇರೆಬೈಲ್‌-ಕೊಂಚಾಡಿಯ ಕಾರ್ಜಹಿತ್ಲು ಪ್ರದೇಶದಲ್ಲಿ ಎರಡು ವರ್ಷಗಳ ಹಿಂದೆ ಹೊಸದಾಗಿ ಕಾಂಕ್ರೀಟ್‌ ರಸ್ತೆ ನಿರ್ಮಾಣಗೊಂಡಿದ್ದು, ಆದರೆ ಮಳೆ ನೀರು ಹರಿಯುವುದಕ್ಕೆ ಚರಂಡಿಯನ್ನು ನಿರ್ಮಿಸದೇ ಇರುವುದರಿಂದ ಈಗ ಮಳೆ ನೀರು ಮನೆಗಳಿಗೆ ನುಗ್ಗುವ ಭೀತಿ ಎದುರಾಗಿದೆ.

Advertisement

ಜೋರು ಮಳೆ ಬರುವ ವೇಳೆ ರಸ್ತೆಯಲ್ಲಿ ಪೂರ್ತಿ ನೀರು ಹರಿಯುತ್ತದೆ. ಆದರೆ ಸ್ಥಳೀಯ ಪ್ರತಿ ಮನೆಯವರು ತಮ್ಮ ಕಾಂಪೌಂಡಿನ ಗೇಟಿನ ಮುಂಭಾಗ ಕಟ್ಟೆ ರೀತಿ ಮಾಡಿರುವುದರಿಂದ ನೀರು ಒಳ ನುಗ್ಗಿಲ್ಲ. ಆದರೆ ಇತ್ತೀ ಚೆಗೆ ಸುರಿದಂತೆ ಧಾರಾಕಾರ ಮಳೆ ಬಂದರೆ ನೀರು ಒಳನುಗ್ಗುವ ಸಾಧ್ಯತೆ ಹೆಚ್ಚಿದೆ.

ಮೇ 29ರಂದು ಕೂಡ ಸ್ವಲ್ಪ ಪ್ರಮಾಣದ ನೀರು ಒಳನುಗ್ಗಿದ್ದು, ಯಾವುದೇ ಅಪಾಯ ಸೃಷ್ಟಿಯಾಗಿಲ್ಲ. ಆದರೆ ಮುಂದೆ ಪೂರ್ಣ ಪ್ರಮಾಣದಲ್ಲಿ ಮಳೆ ಆರಂಭಗೊಂಡರೆ ನೀರು ಮನೆಗೆ ನುಗ್ಗುವ ಸಾಧ್ಯತೆಯ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ. ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಅರ್ಧಕ್ಕೆ
ಚರಂಡಿ ಮಾಡಿ ಹಾಗೇ ಬಿಟ್ಟಿದ್ದಾರೆ.

ಮಳೆ ನೀರು ಕಾಂಕ್ರೀಟ್‌ ರಸ್ತೆಯಲ್ಲಿ ಹರಿದು ಪಾಚಿ ಉಂಟಾಗಿರುವುದರಿಂದ ದ್ವಿಚಕ್ರ ಸವಾರರು ಬೀಳುವ ಅಪಾಯವೂ ಇದೆ. ಹೀಗಾಗಿ ಸಂಬಂಧಪಟ್ಟ ಪಾಲಿಕೆಯು ಈ ಕುರಿತು ಗಮನಹರಿಸಿ ಮಳೆ ನೀರು ಹರಿಯುವ ಚರಂಡಿ ವ್ಯವಸ್ಥೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next