Advertisement

ಲಂಕಾ ಕ್ರಿಕೆಟಿಗ ಧನಂಜಯ ಡಿ’ಸಿಲ್ವ ತಂದೆ ಕಗ್ಗೊಲೆ

06:55 AM May 26, 2018 | |

ಕೊಲಂಬೊ: ಶ್ರೀಲಂಕಾ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಧನಂಜಯ ಡಿ’ಸಿಲ್ವ ಅವರ ತಂದೆಯನ್ನು ಕೊಲೆ ಮಾಡಲಾಗಿದೆ. ಲಂಕಾ ತಂಡ ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಹೊರಡಲು ಒಂದು ದಿನ ಬಾಕಿ ಇರುವಾಗ ಈ ದುರ್ಘ‌ಟನೆ ಸಂಭವಿಸಿದ್ದು, ಡಿ’ಸಿಲ್ವ ವಿಂಡೀಸ್‌ ಸರಣಿಯಿಂದ ಹಿಂದೆ ಸರಿದಿದ್ದಾರೆ.

Advertisement

ಧನಂಜಯ ಡಿ’ಸಿಲ್ವ ಅವರ ತಂದೆ ರಂಜನ್‌ ಡಿ’ಸಿಲ್ವ ಅವರನ್ನು ಗುರುವಾರ ರಾತ್ರಿ ಕೊಲಂಬೊ ಹೊರವಲಯದ ರತ್ಮಾಲನ ಎಂಬಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಇದಕ್ಕೆ ಕಾರಣ ತಿಳಿದು ಬಂದಿಲ್ಲ, ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಂಜನ್‌ ಡಿ’ಸಿಲ್ವ ಸ್ಥಳೀಯ ರಾಜಕಾರಣಿಯಾಗಿದ್ದರು.

ಧನಂಜಯ ಡಿ’ಸಿಲ್ವ ಬದಲು ಶ್ರೀಲಂಕಾ ತಂಡದಲ್ಲಿ ಯಾರು ಅವಕಾಶ ಪಡೆಯಲಿದ್ದಾರೆ ಎಂಬುದನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ತಿಳಿಸಿದೆ. ಅಭ್ಯಾಸದ ವೇಳೆ ಕೈಬೆರಳಿಗೆ ಗಾಯ ಮಾಡಿಕೊಂಡ ಆರಂಭಕಾರ ದಿಮುತ್‌ ಕರುಣರತ್ನೆ ಕೂಡ ವಿಂಡೀಸ್‌ ಪ್ರವಾಸದಿಂದ ಹೊರಗುಳಿಯಲಿದ್ದಾರೆ.
ಶ್ರೀಲಂಕಾ ಕ್ರಿಕೆಟ್‌ ತಂಡ ಶುಕ್ರವಾರ ಕೆರಿಬಿಯನ್‌ ದ್ವೀಪದತ್ತ ಪ್ರಯಾಣ ಬೆಳೆಸಿತು.

Advertisement

Udayavani is now on Telegram. Click here to join our channel and stay updated with the latest news.

Next