Advertisement

ಮದ್ಯವ್ಯಸನಿ ಮಗನ ಕಾಟ: ಬೆಂಕಿ ಹಚ್ಚಿ ಕೊಂದ ತಂದೆ

03:21 PM Jul 02, 2023 | Team Udayavani |

ದೊಡ್ಡಬಳ್ಳಾಪುರ: ಮದ್ಯವ್ಯಸನಕ್ಕೆ ತುತ್ತಾಗಿದ್ದ ಮಗನ ಕಾಟ ತಾಳಲಾರದೆ ತಂದೆಯೇ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ವಾಣಿಗರಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಹತ್ಯೆಗೀಡಾದ ಯುವಕ ನನ್ನು ಆದರ್ಶ (25)ಎಂದು ಗುರುತಿಸಲಾಗಿದೆ.

ಮೃತನ ತಂದೆ ವಾಣಿಗರಹಳ್ಳಿ ನಿವಾಸಿ ಜಯ ರಾಮಯ್ಯ ಹತ್ಯೆ ಮಾಡಿದ ಆರೋಪಿ ಯಾಗಿದ್ದಾರೆ. ಆದರ್ಶ ದಿನನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರಿಂದ ಬೇಸತ್ತು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಯ ರಾಮಯ್ಯ ಸಭ್ಯನಾಗಿದ್ದು, ಮಗ ಕೆಟ್ಟ ಚಟಗಳಿಗೆ ದಾಸನಾಗಿದ್ದ. ಕುಡಿಯಲು ಹಣ ನೀಡಲು ಒಪ್ಪದಿದ್ದಾಗ ತಾಯಿಯನ್ನೇ ಮನಬಂದಂತೆ ಥಳಿಸಿ ಹಣ ಕಿತ್ತುಕೊಂಡಿದ್ದಾನೆ. ಇದರಿಂದ ಕೋಪಗೊಂಡ ತಂದೆ ಜಯ ರಾಮಯ್ಯ ಮಗ ಆದರ್ಶನನ್ನು ಥಳಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೈಕಾಲುಗಳನ್ನು ಕಟ್ಟಿ ಹಾಕಿ ಕೆರೆ ಕೋಡಿಯ ಬಳಿ ಇರುವ ತಮ್ಮ ಹೊಲಕ್ಕೆ ತಂದು ಹಲಸಿನ ಮರದ ಕೆಳಗೆ ಸುಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪುರು ಷೋತ್ತಮ್‌ ಹಾಗೂ ದೊಡ್ಡ ಬೆಳವಂಗಲ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಹರೀಶ್‌ ಕುಮಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಜಯರಾಮಯ್ಯ ಬಂಧಿಸಲಾಗಿದೆ. ದೊಡ್ಡ ಬೆಳವಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next