Advertisement

ಶಾಲೆಗೆ ಬಿಡಲು ಸ್ಕೂಟಿಯಲ್ಲಿ ತೆರಳುವಾಗ ಅಪ್ಪ-ಮಗಳು ಸಾವು

10:32 AM Apr 04, 2023 | Team Udayavani |

ಮಾಗಡಿ: ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ನಲ್ಲಿದ್ದ ತಂದೆ, ಮಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಜಮಾಲ್‌ ಸಾಬರ್‌ ಪಾಳ್ಯದ ಹತ್ತಿರದ ವೆಂಕಟ್‌ ಶಾಲೆ ಬಳಿ ನಡೆದಿದೆ.

Advertisement

ತಾಲೂಕಿನ ಕಲ್ಯಾ ಗ್ರಾಮದ ನಿವಾಸಿ ಯೋಗೇಶ್‌ (45) ಮತ್ತು ಮಗಳು ಹೇಮಶ್ರೀ (15) ಮೃತ ದುರ್ದೈವಿಗಳು.

ಯೋಗೇಶ್‌ ತನ್ನ ಮಗಳು ಹೇಮಾಶ್ರೀಯನ್ನು ಶಾಲೆಗೆ ಬಿಡಲು ಕಲ್ಯಾದಿಂದ ಸ್ಕೂಟರ್‌ನಲ್ಲಿ ಬೆಳಗ್ಗೆ 9ಗಂಟೆಗೆ ತೆರಳಿದ್ದರು. ಶಾಲೆ ಬಳಿ ಸ್ಕೂಟರ್‌ ತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ಮಾಗಡಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದ್ದು, ಯೋಗೇಶ್‌ ಸ್ಥಳದಲ್ಲಿ ಮೃತಪಟ್ಟಿರೆ, ಮಗಳು ಹೇಮಶ್ರೀ ಆಸ್ಪತ್ರೆಗೆ ಸಾಗಿಸುವಾಗ ಮರ್ಗಮಧ್ಯೆ ಸಾವನ್ನಪ್ಪಿದ್ದಾಳೆ.

ಯೋಗೇಶ್‌ ಅವರು ಕಲ್ಯಾ ಡೇರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಹೇಮಶ್ರೀ 9ನೇ ತರಗತಿಯಲ್ಲಿ ಓದುತ್ತಿದ್ದು, ಶಾಲೆಗೆ ಬಿಡಲು ಸ್ಕೂಟರ್‌ನಲ್ಲಿ ತೆರಳಿದಾಗ ಶಾಲೆ ಬಳಿಯೇ ಅಪಘಾತ ನಡೆದಿದೆ. ಕಾರು ಚಾಲಕ ಕಾರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next