Advertisement

ಶಬರಿಮಲೆ: ಉಪವಾಸ ನಿರತ ಕೇರಳ ಬಿಜೆಪಿ ನಾಯಕಿ ಆಸ್ಪತ್ರೆಗೆ ದಾಖಲು

02:09 PM Dec 28, 2018 | Team Udayavani |

ತಿರುವನಂತಪುರ : ಶಬರಿಮಲೆ ವಿವಾದಕ್ಕೆ ಸಂಬಂಧಿಸಿ ಕಳೆದ 11 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್‌ ಅವರ ಆರೋಗ್ಯ ತೀವ್ರವಾಗಿ ಹದಗೆಡುತ್ತಿರುವ ಕಾರಣ ಅವರನ್ನು ಪೊಲೀಸರು ಇಂದು ಬಂಧಿಸಿ, ಎತ್ತಂಗಡಿ ಮಾಡಿ, ಸರಕಾರಿ ಆಸ್ಪತ್ರೆಗೆ ಸೇರಿಸಿದರೆಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

ಶಬರಿಮಲೆ ದೇವಸ್ಥಾನ ಧಾರ್ಮಿಕ ವಿಧಿ ವಿಧಾನಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಕೇರಳ ಬಿಜೆಪಿ ಕಳೆದ ಡಿ.3ರಿಂದ ಆರಂಭಿಸಿರುವ ಪ್ರತಿಭಟನೆಯ ಅಂಗವಾಗಿ ಇಲ್ಲಿನ ಸಚಿವಾಲಯದ ಮುಂದೆ ಸರದಿ ನಿರಶನ ಆಂದೋಲನ ನಡೆಸುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next