Advertisement
ಕಳೆದ ಆಗಸ್ಟ್ ತಿಂಗಳಲ್ಲಿ ಕಂಡು ಕೇಳರಿಯದ ಭೀಕರ ಪ್ರವಾಹದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿ 1.6 ಲಕ್ಷ ಹೆಕ್ಟೇರ್ನಷ್ಟು ವಿವಿಧ ಬೆಳೆ ನಾಶವಾಗಿ ಸುಮಾರು 130.48 ಕೋಟಿ ರೂ. ನಷ್ಟವಾಗಿರುವುದು ಕೃಷಿ ಇಲಾಖೆ ನಡೆಸಿರುವ ಸರ್ವೇಯಲ್ಲಿ ವರದಿಯಾಗಿದೆ. ಬೆಳೆ ಹಾನಿ ಕುರಿತು ಸರ್ವೆ ವರದಿ ಸರ್ಕಾರಕ್ಕೆ ಹೋಗಿದೆ. ಆದರೆ ಪ್ರವಾಹದಲ್ಲಿ ಬೆಳೆ ಕಳೆದುಕೊಂಡ ರೈತರಿಗೆ ಮಾತ್ರ ಪರಿಹಾರದ ಹಣ ದೊರಕಿಲ್ಲ.
Related Articles
Advertisement
ರೈತರ ಖಾತೆಗೆ ಬೆಳೆ ಪರಿಹಾರ: ನೆರೆ ಹಾವಳಿಯಲ್ಲಿ ಹಾನಿಯಾದ ರೈತರ ಬೆಳೆಗಳ ಸರ್ವೆ ಕಾರ್ಯ ಮುಕ್ತಾಯವಾಗಿ ಸರ್ಕಾರಕ್ಕೆ ಕೃಷಿ ಇಲಾಖೆ ವರದಿ ನೀಡಿದ್ದು, ಸರ್ಕಾರ ನಿಗದಿ ಮಾಡಿದ ಪರಿಹಾರ ಹಣವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಿದೆ. ಈಗಾಗಲೇ ಕೃಷಿ ಇಲಾಖೆ ಅಧಿಕಾರಿಗಳು ರೈತರ ಆಧಾರ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳನ್ನು ಡಾಟಾದಲ್ಲಿ ನಮೂದು ಮಾಡುತ್ತಿದೆ. ಒಣ ಬೇಸಾಯಕ್ಕೆ ಸರ್ಕಾರ ಎನ್ಡಿಆರ್ಎಫ್ ನಿಯಮದ ಪ್ರಕಾರ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ 6800 ರೂ. ನೀರಾವರಿಗೆ 13,500 ರೂ, ತೋಟಗಾರಿಕೆಗೆ 18 ಸಾವಿರ ರೂ. ಪರಿಹಾರ ನೀಡಲಿದೆ. ಆದರೆ ಎನ್ ಡಿಆರ್ಎಫ್ ಜೊತೆಗೆ ರಾಜ್ಯ ಸರಕಾರದಿಂದ ಕೂಡಾ ಪ್ರತಿ ಹೆಕ್ಟೇರಿಗೆ 10 ಸಾವಿರ ರೂ. ನೀಡಲಾಗುತ್ತದೆಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಆದರೆ ಎನ್ಡಿಆರ್ಎಫ್ ಪರಿಹಾರ ಬರುತ್ತದೆಯೋ ಅಥವಾ ರಾಜ್ಯ ಸರಕಾರದ 10 ಸಾವಿರ ರೂ ಸೇರಿಸಿ ಬರುತ್ತದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.
ಚಿಕ್ಕೋಡಿ ಕೃಷಿ ಉಪವಿಭಾಗ ವ್ಯಾಪ್ತಿಯ ವಿವಿಧ ತಾಲೂಕುಗಳಲ್ಲಿ ಹಾನಿಯಾದ ವಿವರ, ಚಿಕ್ಕೋಡಿ ಉಪವಿಭಾಗದ ಎಂಟು ತಾಲೂಕಿನಲ್ಲಿ ಕೃಷಿ ಇಲಾಖೆ ಬೆಳೆ ಹಾನಿ ಸರ್ವೆ ಕಾರ್ಯ ಮುಕ್ತಾಯ ಮಾಡಿ ಕಂದಾಯ ಇಲಾಖೆಗೆ ಒಪ್ಪಿಸಲಾಗಿದೆ. ಕಂದಾಯ ಇಲಾಖೆಯು ಶೇ 50ರಷ್ಟು ಡಾಟಾ ಎಂಟ್ರಿ ಮಾಡಿದೆ. ಶೀಘ್ರ ರೈತರ ಖಾತೆಗೆ ಬೆಳೆ ಪರಿಹಾರ ಜಮೆ ಮಾಡಲಾಗುತ್ತಿದೆ. –ಎಲ್.ಐ.ರೂಡಗಿ, ಉಪ ಕೃಷಿ ನಿರ್ದೇಶಕರು ಚಿಕ್ಕೋಡಿ.
-ಮಹಾದೇವ ಪೂಜೇರಿ