Advertisement

ಜಿಂಕೆಗಳ ಕಾಟಕ್ಕೆ ಕಂಗಾಲಾದ ರೈತರು

09:21 AM Jul 29, 2019 | Suhan S |

ಕುಕನೂರು: ಭೀಕರ ಬರ ಜೀವ ಸಂಕುಲವನ್ನು ಸಂಕಷ್ಟಕ್ಕೆ ದೂಡಿರುವುದಕ್ಕೆ ತಾಲೂಕು ಸಾಕ್ಷಿಯಾಗುತ್ತಿದ್ದು, ಆಹಾರಕ್ಕಾಗಿ ಜಿಂಕೆಗಳು ನಡೆಸುತ್ತಿರುವ ಹೋರಾಟ ರೈತರಿಗೆ ಪ್ರಾಣ ಸಂಕಟವಾಗಿದೆ. ತಾಲೂಕು ಬರದಿಂದ ತತ್ತರಿಸಿದ್ದು, ಕುಡಿವ ನೀರು ಹಾಗೂ ಆಹಾರಕ್ಕಾಗಿ ಜಿಂಕೆಗಳ ಪರದಾಡುತ್ತಿವೆ. ಈ ನಡುವೆ ಅಲ್ಪಸ್ವಲ್ಪ ಸುರಿದ ಮಳೆಯನ್ನು ನಂಬಿ ಬಿತ್ತನೆಯಾದ ಬೆಳೆಗಳಿಗೆ ತೇವಾಂಶ ಕೊರತೆ ಎದುರಾಗಿದೆ. ಹೇಗಾದರೂ ಮಾಡಿ ಬೆಳೆ ರಕ್ಷಿಸಿಕೊಳ್ಳಬೇಕೆಂದು ಶ್ರಮಿಸುತ್ತಿರುವ ರೈತರಿಗೆ ಜೆಂಕೆಗಳ ಕಾಟ ನಿದ್ದೆಗೆಡಿಸಿದೆ. ರಾತ್ರಿ ಜಮೀನುಗಳಿಗೆ ನುಗ್ಗುವ ಜಿಂಕೆಗಳು ಬೆಳೆ ಹಾಳು ಮಾಡುತ್ತಿದ್ದು, ರೈತರು ನಿದ್ದೆಗೆಟ್ಟು ಬೆಳೆ ಕಾಯುವಂತಾಗಿದೆ.

ನಿಯಂತ್ರಣಕ್ಕೆ ಕಸರತ್ತು:

ಸತತ ಬರಗಾಲದಿಂದ ತತ್ತರಿಸಿರುವ ರೈತರಿಗೆ ಬೆಳೆಗಳನ್ನು ಉಳಿಸಿಕೊಳ್ಳುವುದು ಸವಾಲಾಗಿಗೆ. ಹೀಗಾಗಿ, ಕೆಲ ರೈತರು ಬೆಳೆಗಳ ರಕ್ಷಣೆಗಾಗಿ ನಾನಾ ಕಸರತ್ತು ಮಾಡುತ್ತಿದ್ದಾರೆ. ಕೆಲವರು ಜಮೀನಿನ ಸುತ್ತ ಬೇಲಿ ಹಾಕಿ, ಜಮೀನಿನಲ್ಲೇ ಒಂದು ಗುಡಿಸಲು ನಿರ್ಮಿಸಿಕೊಂಡು ಜಿಂಕೆಗಳನ್ನು ಓಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಜಿಂಕೆಗಳನ್ನು ಹೆದರಿಸಲು ನಾನಾ ವಸ್ತುಗಳನ್ನೂ ಬಳಸುತ್ತಾ ರೈತರು ನಿದ್ದೆ ಮರೆತಿದ್ದಾರೆ. ಜಿಂಕೆಗಳನ್ನು ಕಾಯುವುದೇ ನಿತ್ಯ ಕಾಯಕವಾಗಿದೆ.
ನಿರಂತರ ಹೋರಾಟ:

ತಾಲೂಕಿನ ಯರೇಹಂಚಿನಾಳ, ಬಿನ್ನಾಳ, ಸಿದ್ನೆಕೊಪ್ಪ, ಸೋಂಪುರ, ಚಿಕ್ಕೇನಕೊಪ್ಪ, ಭಟ್ಟಪನಹಳ್ಳಿ, ಮಂಡಲಗೇರಿ, ಮಸಬಹಂಚಿನಾಳ, ಬೆಣಕಲ್, ಕುಕನೂರು, ದ್ಯಾಂಪುರ, ರಾಜೂರು, ಸಂಗನಹಾಳ, ತೊಂಡಿಹಾಳ, ಬಂಡಿಹಾಳ, ಕರಮುಡಿ ಹಾಗೂ ಇನ್ನಿತರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಪ್ರಕಾರ ಕುಕನೂರು ಮತ್ತು ಯಲಬುರ್ಗಾ ತಾಲೂಕಿನಲ್ಲಿ ಸುಮಾರು 20,572 ಕೃಷ್ಣಮೃಗ, 16,420 ಜಿಂಕಾರ, 10,856 ಲಾಂಗಚಾಪರ ಎಂಬ ಮೂರು ಪ್ರಜಾತಿಯ ಜಿಂಕೆಗಳಿವೆ.
ಜಿಂಕೆ ವನದ ಬದಲು ಪರ್ಯಾಯ ಆಗಲಿಲ್ಲ:

ಜಿಂಕೆ ವನದ ಬದಲು ಪರ್ಯಾಯವಾಗಿ ಹೊಸ ಯೋಜನೆ ರೂಪಿಸಿದ್ದರು. ಕೊಪ್ಪಳ ಹಾಗೂ ಗದಗ ಜಿಲ್ಲೆಗಳ ಮಧ್ಯ ಹಳ್ಳದ ದಂಡೆಯಲ್ಲಿ ಜಿಂಕೆಗಳಿಗೆ ಆಹಾರ ಬೆಳೆಯುವುದು ಹಾಗೂ ಹಳ್ಳದಲ್ಲಿ ನೀರು ಸಂಗ್ರಹವಾಗುವಂತೆ ನೋಡಿಕೋಳ್ಳುವುದಕ್ಕೆ ಪ್ರಸ್ತಾವನೆ ಸಿದ್ಧಪಡಿಸಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಅದಕ್ಕೆ ಸಬೂಬು ಎನ್ನುವಂತೆ ಜಿಂಕೆಗಳು ಅಂಜುಬುರಕ ಪ್ರಾಣಿ. ಬೇಸಿಗೆಯಲ್ಲಿ ಬಿಸಿಲು ತಡೆದುಕೊಳ್ಳಲು ಆಗುವುದಿಲ್ಲ. ಒಂದು ಬಾರಿ ಮನುಷ್ಯರನ್ನು ಕಂಡರೆ 15 ದಿನಗಳವರೆಗೆ ಆ ಭಾಗಕ್ಕೆ ಹೋಗುವುದಿಲ್ಲ. ಆದ್ದರಿಂದ ಹಳ್ಳದ ದಂಡೆ ಮೇಲೆ ಆಹಾರ, ಕುಡಿಯಲು ನೀರು ಸಿಕ್ಕರೆ ರೈತರ ಜಮೀನುಗಳಿಗೆ ನುಗ್ಗುವುದು ತಪ್ಪುತ್ತದೆ ಎನ್ನುತ್ತಿದ್ದಾರೆ.
Advertisement

ಸುಮಾರು ವರ್ಷಗಳಿಂದ ಜಿಂಕೆವನ ನಿರ್ಮಿಸುವಂತೆ ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೆ ಇದುವರೆಗೂ ಎಲ್ಲ ಸರಕಾರಗಳು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿವೆ. ಇನ್ನಾದರೂ ರೈತರ ಗೋಳಾಟ ಅಂತ್ಯವಾಗುತ್ತದೆ ಎಂಬುವ ನಂಬಿಕೆ ನನ್ನದು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರಾಗಿದೆ.•ಅಂದಪ್ಪ ಕೊಳೂರು ರೈತ ಸಂಘದ ಜಿಲ್ಲಾಧ್ಯಕ್ಷ

ಈ ಬಾರಿ ಆಡಳಿತಕ್ಕೆ ಬಂದ ತಕ್ಷಣ ಕೊಪ್ಪಳ ಜಿಲ್ಲೆಯಲ್ಲದೇ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ರೈತರು ಜಿಂಕೆಗಳಿಂದ ಆಗುತ್ತಿರುವ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬಿಜೆಪಿ ಆಡಳಿತದ ಸಂದರ್ಭದಲ್ಲಿ ಜಿಂಕೆ ವನಕ್ಕೆ ಸುಮಾರು 50 ಲಕ್ಷ ರೂ. ಬಿಡುಗಡೆ ಮಾಡಿತ್ತು.•ಹಾಲಪ್ಪ ಆಚಾರ್‌ ಯಲಬುರ್ಗಾ ಶಾಸಕ

 

•ಎಲ್. ಮಂಜುನಾಥಪ್ರಸಾದ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next