Advertisement

ನಾಳೆಯ ಮುಷ್ಕರಕ್ಕೆ ರೈತರ ಬೆಂಬಲ

01:20 AM Jan 07, 2019 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಮಂಗಳವಾರ ಮತ್ತು ಬುಧವಾರ ಕೇಂದ್ರ ಕಾರ್ಮಿಕರ ಒಕ್ಕೂಟವು ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ದೇಶಾದ್ಯಂತದ ರೈತರೂ ಬೆಂಬಲ ಸೂಚಿಸಿದ್ದಾರೆ. 

Advertisement

ಅಖೀಲ ಭಾರತ ಕಿಸಾನ್‌ ಸಭಾ(ಎಐಕೆಎಸ್‌) ಮತ್ತು ಭೂಮಿ ಅಧಿಕಾರ್‌ ಆಂದೋಲನ್‌ಗಳು 8 ಮತ್ತು 9ರಂದು ಗ್ರಾಮೀಣ ಹರತಾಳ, ರೈಲು ತಡೆ ಮತ್ತು ರಸ್ತೆ ತಡೆ ನಡೆಸಲಿದೆ ಎಂದು ಎಐಕೆಎಸ್‌ ಪ್ರಧಾನ ಕಾರ್ಯದರ್ಶಿ ಹನ್ನಾನ್‌ ಮೊಲ್ಲಾ ರವಿವಾರ ತಿಳಿಸಿದ್ದಾರೆ. 

ದೇಶಾದ್ಯಂತ ರೈತರು ಅಂದು ರಸ್ತೆ ತಡೆ, ಪ್ರತಿಭಟನೆ, ಧರಣಿ ನಡೆಸುವ ಮೂಲಕ ಮುಷ್ಕರಕ್ಕೆ ಬೆಂಬಲ ನೀಡಲು ರೈತರ ಕ್ರಿಯಾ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್‌ ಸೇನ್‌ ಹೇಳಿದ್ದಾರೆ. ಈಗಾಗಲೇ ಬ್ಯಾಂಕುಗಳ ನೌಕರರೂ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next