Advertisement

ಗಂಗಾವತಿಯಲ್ಲಿ ಟ್ರಾಕ್ಟರ್ ರಾಲಿಗೆ ಪೊಲೀಸರ ತಡೆ:  ರಸ್ತೆಯಲ್ಲಿ ಪ್ರತಿಭಟನೆ

04:45 PM Jan 26, 2021 | Team Udayavani |

ಗಂಗಾವತಿ: ಕೇಂದ್ರದ ಮೂರು ಕೃಷಿ ಕಾಯ್ದೆ ಮತ್ತು ಎಪಿಎಂಸಿ ಖಾಸಗೀಕರಣದ ವಿರುದ್ಧ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಅನಿರ್ಧಿಷ್ಟ ಪ್ರತಿಭಟನೆ ಬೆಂಬಲಿಸಿ ಮಂಗಳವಾರ ಗಂಗಾವತಿಯಲ್ಲಿ ನಡೆದ ರೈತರ ಟ್ರ್ಯಾಕ್ಟರ್ ರಾಲಿಗೆ ಪೊಲೀಸರು ಪರವಾನಿಗೆ‌ ನೀಡದಿರುವುದನ್ನು ಕರ್ನಾಟಕ ಪ್ರಾಂತ್ಯ ‌ರೈತ ಸಂಘ ಸಿಐಟಿಯು ಹಾಗೂ ಕಾರ್ಮಿಕ ಕೂಲಿಕಾರರು ಮತ್ತು ಪ್ರಗತಿಪರ ಸಂಘಟನೆಯ ಕಾರ್ಯಕರ್ತರು ಖಂಡಿಸಿ ಕೊಪ್ಪಳ ರಸ್ತೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರಕಾರದ ನಿಲುವನ್ನು ಖಂಡಿಸಿದರು.

Advertisement

ಈ ವೇಳೆ ಸಿಐಟಿಯು ಸಂಘಟನೆಯ ಮುಖಂಡ ಜಿ.ನಾಗರಾಜ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರ ರೈತ ಕಾರ್ಮಿಕರ ವಿರೋಧಿಯಾಗಿದೆ. ರೈತರ ಹೋರಾಟ ಹತ್ತಿಕ್ಕುವ ಸರಕಾರಕ್ಕೆ ಮುಂದಿನ‌ ದಿನಗಳಲ್ಲಿ ದೇಶದ ಜನರು ಬುದ್ದಿ ಕಲಿಸಲಿದ್ದಾರೆ ಎಂದರು.

ವಾಗ್ವಾದ: ಟ್ರಾಕ್ಟರ್ ರಾಲಿಯಲ್ಲಿ‌ ಪಾಲ್ಗೊಳ್ಳಲು ಆಗಮಿಸಿದ್ದ 200 ಟ್ರಾಕ್ಟರ್ ಗಳನ್ನು ಕಂಪ್ಲಿ, ಕೊಪ್ಪಳ, ಕನಕಗಿರಿ, ಆನೆಗೊಂದಿ ರಸ್ತೆಗಳಲ್ಲಿ ತಡೆಹಿಡಿದಿರುವ ಪೊಲೀಸರು ಮತ್ತು ಪ್ರತಿಭಟನಾಕಾರರ ವಿರುದ್ದ ವಾಗ್ವಾದ ನಡೆಯಿತು. ಗಂಗಾವತಿ ನಗರದ ಹೊರಗೆ ನಿಲ್ಲಿಸಿರುವ ಬಗ್ಗೆ ಖಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next