Advertisement

ವಿದರ್ಭ ರೀತಿ ಪ್ಯಾಕೇಜ್‌ ಘೋಷಿಸಲಿ

08:05 PM Feb 26, 2021 | Team Udayavani |

ಬಂಗಾರಪೇಟೆ: ರಾಜ್ಯ-ಕೇಂದ್ರ ಸರ್ಕಾರ ರೈತರ, ಬಡವರ, ಕಾರ್ಮಿಕರ ಪರ ನಿಲ್ಲದೆ, ತಾರತಮ್ಯ ಧೋರಣೆ ಅನುಸರಿಸುತ್ತಿವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮರಗಲ್‌ ಶ್ರೀನಿವಾಸ್‌ ಆರೋಪಿಸಿದರು.

Advertisement

ತಾಲೂಕು ಕಚೇರಿ ಎದುರು ರೈತ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ದಿನೇ ದಿನೆ ಡೀಸೆಲ್‌, ಪೆಟ್ರೋಲ್‌, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಏರಿಕೆಯಾಗು  ತ್ತಿರುವುದನ್ನು ಖಂಡಿಸಿದ ಅವರು, ಮುಂಬರುವ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಎಲ್ಲಾ ಬೇಡಿಕೆಗಳನ್ನು ಪೂರೈಸಬೇಕು ಎಂದು ಒತ್ತಾಯಿಸಿದ ಅವರು, ತಾಲೂಕಿಗೆ ವಿಶೇಷ ವಿದರ್ಭ ಪ್ಯಾಕೇಜ್‌ ಘೋಷಣೆ ಮಾಡಬೇಕು ಒತ್ತಾಯಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಅಮರೇಶ್‌ ಮಾತನಾಡಿ, ತಾಲೂಕಿನ ಪ್ರತಿ ಗ್ರಾಮದ ಕೆರೆಗಳಿಗೆ ಕೆ.ಸಿ.ವ್ಯಾಲಿ ಯೋಜನೆ ಹರಿಸಬೇಕು, ರೈತರ ಸಂಪೂರ್ಣ ಸಾಲ ಮನ್ನಾ, ಎತ್ತಿನಹೊಳೆ ಯೋಜನೆ ಕೋಲಾರ ಜಿಲ್ಲೆಗೆ ಯೋಜನೆ ಜಾರಿಯಾಗುವಂತೆ ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌, ಜಿಲ್ಲಾ ಉಪಾಧ್ಯಕ್ಷ ಕೂಟೇರಿ ನಾಗರಾಜ್‌, ಸ್ವಸ್ತಿಕ್‌ ಶಿವು, ಜಿಲ್ಲಾ ಸಂಚಾಲಕ ಉದಯ್‌ ಕುಮಾರ್‌, ತಾಲೂಕು ಪ್ರಧಾನ ಕಾರ್ಯದರ್ಶಿ ಮರಗಲ್‌ ಎಂ.ಎನ್‌.ರಾಜು, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಾಗೊಂದಿ ರತ್ನಮ್ಮ, ಪ್ರಧಾನ ಕಾರ್ಯದರ್ಶಿ ಸುಕನ್ಯ, ಮುಳಬಾಗಿಲು ಅಧ್ಯಕ್ಷ ಎಲ್ಲೇಶ್‌ಕುಮಾರ್‌, ಕುಮಾರ್‌, ಬಾಬು, ಆನಂದಪ್ಪ, ಮುನಿರತ್ನಂರೆಡ್ಡಿ, ಪ್ರೇಮ, ಮಂಜುಳಾ, ಕಾಂತಮ್ಮ, ಆಯುಷಾ, ಫಾತಿಮಾ, ಯಲ್ಲಪ್ಪ, ಹರೀಶ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next