Advertisement

ಎಪಿಎಂಸಿ ಕಾಯ್ದೆಯಿಂದ ರೈತರ ಆದಾಯ ದ್ವಿಗುಣ: ಪ್ರತಾಪ್ ಸಿಂಹ ನಾಯಕ್

07:36 PM Dec 09, 2020 | mahesh |

ವಿಧಾನ ಪರಿಷತ್ : ಕೃಷಿಕರಿಗೆ ಅನುಕೂಲವಾಗುವ ಎಪಿಎಂಸಿ ಕಾಯ್ದೆಯನ್ನು ವೈಯಕ್ತಿಕ ಅಥವಾ ರಾಜಕೀಯ, ಪಕ್ಷದ ಅಜೆಂಡಕ್ಕಾಗಿ ವಿರೋಧ ಮಾಡುವುದು ಸರಿಯಲ್ಲ ಎಂದು ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.

Advertisement

ಎಪಿಎಂಸಿ ಮಸೂದೆ ಬೆಂಬಲಿಸಿ ಮಾತನಾಡಿದ ಅವರು, ನಮ್ಮದು ಪ್ರಕೃತಿ ಜತೆಗಿನ ಬದುಕು. ಕೃಷಿ ಆಧಾರಿತ, ಕೃಷಿ ಅವಲಂಬಿತ ದೇಶ ನಮ್ಮದು. ಕೃಷಿ ಆದಾಯ ದ್ವಿಗುಣ ಮಾಡುವ ಮೂಲಕ ಕೃಷಿಕರ ಜೀವನ ಮಟ್ಟ ಇನ್ನಷ್ಟು ಸುಧಾರಿಸಬೇಕು. ಕೃಷಿ, ಕೃಷಿಕ್ಷೇತ್ರದಲ್ಲಿ ಹೊಸ ಬದಲಾವಣೆ ಆಗಬೇಕಿದೆ. ರೈತರಲ್ಲಿ ವಿಶ್ವಾಸ ತುಂಬಿಸಿ, ಮುಕ್ತ ಮಾರುಕಟ್ಟೆ, ವಾತಾವರಣ ನಿರ್ಮಾಣ ಮಾಡಬೇಕು. ವೈಯಕ್ತಿಕ ಅಥವಾ ಪಕ್ಷದ ಅಜೆಂಡ ಇಟ್ಟುಕೊಂಡು ಎಪಿಎಂಸಿ ಮಸೂದೆ ವಿರೋಧ ಮಾಡುವುದು ಸರಿಯಲ್ಲ.

ರಾಜ್ಯದ ಆರ್ಥಿಕತೆ, ಕೃಷಿಕರ ಹಿತದೃಷ್ಟಿಯಿಂದ ಈ ಮಸೂದೆಗೆ ಬೆಂಬಲ ಸೂಚಿಸಬೇಕು. ಕೋವಿಡ್ ಸಂದರ್ಭದಲ್ಲೂ ದೇಶದ ಆರ್ಥಿಕತೆಯನ್ನು ಕೃಷಿಕರು ಕಾಪಾಡಿದ್ದಾರೆ. ಉದಾರೀಕರಣದಿಂದ ಕೈಗಾರಿಕಾ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಹಾಗೆಯೇ ಈ ಮಸೂದೆ ಕೃಷಿ ಕ್ಷೇತ್ರದಲ್ಲಿ ಹೊಸ ವಿಶ್ವಾಸ ಮೂಡಿಸಲಿದೆ. ಮಧ್ಯವರ್ತಿಗಳನ್ನು ದೂರ ಮಾಡಿ, ಕೃಷಿಕರಿಗೆ ನೇರ ಲಾಭವಾಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next