Advertisement

Viral Video; ಹಸಿದ ಸಿಂಹದ ಬಾಯಿಯಿಂದ ಗೋವನ್ನು ರಕ್ಷಿಸಿದ ಧೈರ್ಯಶಾಲಿ ರೈತ !

09:13 PM Jul 01, 2023 | Team Udayavani |

ಗುಜರಾತ್‌: ಗಿರ್ ಸೋಮನಾಥ್ ಜಿಲ್ಲೆಯಲ್ಲಿ ಹಸಿದ ಸಿಂಹದ ಬಾಯಿಗೆ ಸಿಕ್ಕಿದ್ದ ತನ್ನ ಹಸುವನ್ನು ರೈತನೊಬ್ಬ ಧೈರ್ಯದಿಂದ ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ವಿಡಿಯೋದಲ್ಲಿ, ರೈತ ತನ್ನ ಹಸುವನ್ನು ಉಳಿಸಲು ಸಿಂಹವನ್ನು ಓಡಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಸಿಂಹವು ಹಗಲು ಹೊತ್ತಿನಲ್ಲಿ ಬೇಟೆಗಾಗಿ ಹಸುವಿನ ಮೇಲೆ ದಾಳಿ ಮಾಡಿತ್ತು. ರೈತನು ತನ್ನ ಹಸುವನ್ನು ಉಳಿಸಲು ಸಿಂಹದ ಮುಂದೆ ಹೋಗಿದ್ದು, ಹಸುವನ್ನು ಸಿಂಹದ ಬಾಯಿಯಿಂದ ಬಿಡಿಸುವಂತೆ ಮಾಡಿದ್ದಾನೆ. ಈ ದೃಶ್ಯವನ್ನು ಹಾದುಹೋಗುತ್ತಿದ್ದ ಕಾರು ಚಾಲಕನೊಬ್ಬ ರೆಕಾರ್ಡ್ ಮಾಡಿದ್ದು, ಜುಲೈ 29 ರಂದು ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಕಿರಿತ್ ಸಿಂಗ್ ಚೌಹಾನ್ ಎಂಬ ರೈತ ತನ್ನ ಹಸುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಾಧ್ಯಮಗಳ ಮಾಹಿತಿಯಿಂದ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next