Advertisement

Kerala: ರೈತ ಆತ್ಮಹತ್ಯೆ- ಎಲ್‌ಡಿಎಫ್ ಸರ್ಕಾರದ ವಿರುದ್ಧ ಸಚಿವೆ ಶೋಭಾ ತರಾಟೆ

09:29 PM Nov 17, 2023 | Pranav MS |

ತಿರುವನಂತಪುರ: ಕೇರಳದಲ್ಲಿ ಭತ್ತದ ಬೆಳೆಗೆ ಪ್ರಸಿದ್ಧವಾಗಿರುವ ಕುಟ್ಟನಾಡು ಪ್ರದೇಶದಲ್ಲಿ ಇತ್ತೀಚೆಗಷ್ಟೇ ರೈತರೊಬ್ಬರು ಆತ್ಮಹತ್ಯೆಗೆ ಶರಣಾದ ಪ್ರಕರಣ ಸಂಬಂಧಿಸಿದಂತೆ ಕೇರಳ ಸರ್ಕಾರವನ್ನು ಕೇಂದ್ರಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತರಾಟೆ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರದ ನಿಧಿಯನ್ನು ರೈತರ ಕಲ್ಯಾಣಕ್ಕೆ ಬಳಸಿಕೊಳ್ಳುವಲ್ಲಿ ರಾಜ್ಯಸರ್ಕಾರ ವಿಫ‌ಲವಾಗಿದೆ ಎಂದು ಟೀಕಿಸಿದ್ದಾರೆ.

Advertisement

ಶಬರಿಮಲೆಗೆ ಭೇಟಿ ನೀಡಿದ್ದ ಸಚಿವೆ ಅವರನ್ನು ರಾಜ್ಯದಲ್ಲಿ ರೈತರಿಗೆ ಎದುರಾಗುತ್ತಿರುವ ಸಮಸ್ಯೆಯ ಕುರಿತು ಪ್ರಶ್ನಿಸಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಹಲವಾರು ಸಹಕಾರಿ ಸಂಘಗಳು ಸಂಕಷ್ಟದಲ್ಲಿವೆ ಅವುಗಳಲ್ಲಿನ ಹಣವನ್ನೂ ಬೇರೆಡೆ ವರ್ಗಾಯಿಸುವ ಮೂಲಕ ಭಷ್ಟಾಚಾರದಲ್ಲಿ ರಾಜ್ಯ ಸರ್ಕಾರ ತೊಡಗಿದೆ. ಅಲ್ಲಿ ಹೂಡಿಕೆ ಮಾಡಿದ ರೈತರು ಹಣ ವಾಪಸ್‌ ಸಿಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರದಿಂದ ನೆರವನ್ನೂ ಪಡೆಯದೇ, ತಾವೂ ಏನೂ ಮಾಡದೇ, ರೈತರನ್ನು ಸರ್ಕಾರ ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಎಂದು ಆಕ್ಷೇಪಿಸಿದ್ದಾರೆ. ಇತ್ತೀಚೆಗಷ್ಟೇ ಕುಟ್ಟನಾಡಿನ ರೈತರೊಬ್ಬರು ಸರ್ಕಾರವು ತಮ್ಮಿಂದ ಖರೀದಿಸಿದ ಭತ್ತಕ್ಕೆ ಹಣ ನೀಡಿಲ್ಲವೆಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next