Advertisement

ತೇಗದ ಹಾಡಿಗೆ ಬೆಂಕಿ: ನಂದಿಸಲು ಹೋದ ರೈತ ಸಜೀವ ದಹನ 

11:08 AM Mar 10, 2017 | Team Udayavani |

ಹಾಸನ:  ಜಿಲ್ಲೆಯ ಆಲೂರಿನ ಗಂಜಗೆರೆ ಎಂಬಲ್ಲಿ  ಜಮೀನನಲ್ಲಿ ಬೆಳೆಯಲಾಗಿದ್ದ ತೇಗದ ಹಾಡಿಗೆ ಬಿದ್ದ ಬೆಂಕಿ ನಂದಿಸಲು ಮುಂದಾದ ರೈತರೊಬ್ಬರು ಸಜೀವ ವಾಗಿ ದಹನಗೊಂಡ ಘಟನೆ ಬುಧವಾರ ತಡ ರಾತ್ರಿ ನಡೆದಿದೆ. 

Advertisement

ಬೆಲೆ ಬಾಳುವ ತೇಗದ ಮರಗಳಿಗೆ ಬಿದ್ದ ಬೆಂಕಿ ನಂದಿಸಲು ಹರಸಾಹಸ ಪಟ್ಟ  ಪುಟ್ಟಸ್ವಾಮಿ ಗೌಡ (55) ಎನ್ನುವ ರೈತ ಬೆಂಕಿಯಲ್ಲಿ  ಬೆಂದು ಸ್ಥಳದಲ್ಲೇ ಸಾವನ್ನಪ್ಪಿದಾರೆ. 

ಆಲೂರು ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.ಶವವನ್ನು ಆಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next