Advertisement

ಕೃಷಿ ಹೊಂಡದಲ್ಲಿ ಬಿದ್ದು ವೃದ್ಧ ದಂಪತಿ ಸಾವು

12:07 PM Nov 21, 2019 | keerthan |

ನರಗುಂದ (ಗದಗ): ವೃದ್ಧ ದಂಪತಿ ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮದಗುಣಕಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.

Advertisement

ಮೃತರನ್ನು ಅದೇ ಗ್ರಾಮದ ಶಂಕ್ರಪ್ಪ ತಿಪ್ಪಣ್ಣ ಮಡಿವಾಳರ (75), ಪತ್ನಿ ಹನಮವ್ವ ಶಂಕ್ರಪ್ಪ ಮಡಿವಾಳರ (61) ಸಾವನ್ನಪ್ಪಿದ್ದಾರೆ.

ಗುರುವಾರ ಬೆಳಗಿನ ಜಾವ ಈ ದುರಘಟನೆ ಸಂಭವಿಸಿದ್ದು, ಮೃತ ದೇಹಗಳನ್ನು ಕೃಷಿ ಹೊಂಡದಿಂದ ಹೊರ ತೆಗೆಯಲಾಗಿದೆ.

ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಸ್ಥಳಕ್ಕೆ ನರಗುಂದ ಪೊಲೀಸ್ ಠಾಣೆಯ ಸಿಪಿಐ ಡಿ.ಬಿ.ಪಾಟೀಲ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next