Advertisement

ಗರ್ಭಿಣಿಯನ್ನು ಆಟೋದಲ್ಲಿ ಕರೆದೊಯ್ದ ಕುಟುಂಬ;ಆ್ಯಂಬುಲೆನ್ಸ್ ವಿಳಂಬ ಕುರಿತು ಗ್ರಾಮಸ್ಥರಆಕ್ರೋಶ

11:56 AM Dec 19, 2023 | Team Udayavani |

ಕನಕಗಿರಿ: ಗ್ರಾಮವೊಂದರಲ್ಲಿ ಆ್ಯಂಬುಲೆನ್ಸ್‌ ವ್ಯವಸ್ಥೆ ಸರಿಯಾಗಿಲ್ಲದೇ ಗರ್ಭಿಣಿಯೊಬ್ಬರನ್ನು ಆಟೊದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದ ಘಟನೆ ನಡೆದಿದೆ.

Advertisement

ಕನಕಗಿರಿ ಸಮೀಪದ ಹುಲಿಹೈದರ ಗ್ರಾಮದ ಅಂಬಿಕಾ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸಹೋದರ ನಾಗರಾಜ ಹೊಸಗುಡ್ಡ ಆ್ಯಂಬುಲೆನ್ಸ್‌ ಸಿಬ್ಬಂದಿಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ಸಿಬ್ಬಂದಿ ಹುಲಿಹೈದರ ಗ್ರಾಮಕ್ಕೆ ವಾಹನ ಬರಲು ಒಂದೂವರೆ ಗಂಟೆ ಸಮಯ ಬೇಕಾಗುತ್ತದೆ. ಅಲ್ಲಿಯವರೆಗೆ ಕಾಯಬೇಕು ಅಂತ ಉತ್ತರಿಸಿದ್ದರು.

ಆದರೆ ಅಂಬಿಕಾ ಅವರಿಗೆ ಹೆರಿಗೆ ನೋವು ಹೆಚ್ಚಾಗಿದ್ದರಿಂದ ಬೇರೆ ದಾರಿಯಿಲ್ಲದೆ ಕುಟುಂಬದವರು ಆಕೆಯನ್ನು ಆಟೊದಲ್ಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಫಟನೆ ಕುರಿತು ಸಹೋದರ ನಾಗರಾಜ ಹೊಸಗುಡ್ಡ ಹೇಳುವಂತೆ ಡಿ. 7ರಂದು ಅಣ್ಣನ ಮಗಳು ಶಿವಲೀಲಾ ಅವರ ಹೆರಿಗೆಗಾಗಿ ಕರೆ ಮಾಡಿದಾಗಲೂ ಸಹ ಆ್ಯಂಬುಲೆನ್ಸ್ ಬರಲಿಲ್ಲ. ಆಗಲೂ ಆಟೊದಲ್ಲಿ ಕರೆತಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿಸಿದರು.

ಇದು ಬಹುತೇಕ ಗ್ರಾಮಗಳ ಬಡ ಜನರ ನೋವಿನ ಕಥೆ. ತುರ್ತು ವಾಹನ ಸರಿಯಾದ ಸಮಯಕ್ಕೆ ಬರುವುದಿಲ್ಲ ಎಂದು ನೋವು ತೋಡಿಕೊಂಡರು.

Advertisement

ಇತ್ತೀಚೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ರತ್ನಂ ಪಾಂಡೆಯೆ ಗ್ರಾಮಕ್ಕೆ ಭೇಟಿ ನೀಡಿದಾಗ ಆ್ಯಂಬುಲೆನ್ಸ್ ವಿಳಂಬದ ಕುರಿತು ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next