Advertisement

ಗುಡ್ಡ ಕುಸಿಯುವ ಭೀತಿಯಲ್ಲಿ ಕುಟುಂಬ

11:40 AM Jun 24, 2018 | Team Udayavani |

ಮಹಾನಗರ: ಯೆಯ್ನಾಡಿ ಕುಟುಂಬವೊಂದು ಗುಡ್ಡ ಕುಸಿಯುವ ಭೀತಿಯಿಂದಲೇ ಮೂರು ವರ್ಷಗಳಿಂದ ದಿನದೂಡುತ್ತಿದೆ. ಕೊಂಚಾಡಿ ನಿವಾಸಿಗಳಾದ ಕೃಷ್ಣ ಕುಮಾರ್‌, ಶ್ರೀದೇವಿ ದಂಪತಿಯ ಮನೆಯ ಹಿಂಬದಿ ಗುಡ್ಡ ಪ್ರದೇಶವಾಗಿದ್ದು, 3 ವರ್ಷ ಗಳಿಂದ ಮೇಲಿನಿಂದ ದೊಡ್ಡ ದೊಡ್ಡ ಕಲ್ಲುಗಳು ಬೀಳುತ್ತಿವೆ. ಯಾವಾಗ ಗುಡ್ಡ ಕುಸಿದು ಬೀಳುತ್ತದೆ ಎಂಬ ಭಯದಿಂದಲೇ ಈ ಕುಟುಂಬ ಜೀವನ ಸಾಗಿಸುತ್ತಿದೆ.

Advertisement

ಮನೆ ಮಾಲಕ ಕೃಷ್ಣ ಕುಮಾರ್‌ ಅಂಗವಿಕಲರಾಗಿದ್ದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ದುಡಿಮೆಯಿಂದಲೇ ಕುಟುಂಬದ ಜೀವನ ನಿರ್ವಹಣೆಯಾಗುತ್ತಿದ್ದು, ಅವರ ಇಬ್ಬರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರ ಮನೆಯ ಹಿಂಭಾಗದ ಗುಡ್ಡ ಪ್ರದೇಶ ಖಾಸಗಿ ಕಂಪೆನಿಗೆ ಸೇರಿದ್ದು, ಈ ಸಮಸ್ಯೆ ಬಗ್ಗೆ ಅವರಲ್ಲಿ ತಿಳಿಸಿದಾಗ ಮನೆ ಹಿಂಬದಿಯ ಮೇಲ್ಭಾಗ ಶೀಟ್‌ ಹಾಕಿ ಕಲ್ಲು ಬೀಳದಂತೆ ವ್ಯವಸ್ಥೆ ಮಾಡಿದ್ದರು. ಅದೀಗ ಸವೆದು ತುಂಡಾಗಿದ್ದು, ಮತ್ತೆ ದೊಡ್ಡ ದೊಡ್ಡ ಕಲ್ಲುಗಳು ಬೀಳತೊಡಗಿವೆ. ಆದರೆ ಕಂಪೆನಿ ಆ ಜಾಗವನ್ನು ಉದ್ಯಮಿಯೊಬ್ಬರಿಗೆ ಮಾರಾಟ ಮಾಡಿದ್ದು, ಸಮಸ್ಯೆಯ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಿದ್ದರೂ ಯಾವುದೇ ಪ್ರಯೋಜನವಾಗದೆ ಕುಟುಂಬ ಅಸಾಹಯಕವಾಗಿದೆ.

ಗಮನಕ್ಕೆ ಬಂದಿಲ್ಲ
ಈ ಹಿಂದೆ ಗುಡ್ಡಕುಸಿತದ ಬಗ್ಗೆ ಮಾಹಿತಿ ಬಂದ ಕೂಡಲೇ ಮನೆಯ ಹಿಂದಿನ ಜಾಗದ ಕಟ್ಟಡದ ಎಂಜಿನಿಯರ್‌ಗೆ ಹೇಳಿ ಶೀಟ್‌ ಹಾಕಿಸುವ ಕೆಲಸ ಮಾಡಿದ್ದೆ. ಆದರೆ ಈ ಭಾರಿಯ ಘಟನೆಯ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ.
– ಮಹಾಬಲ ಮಾರ್ಲ
  ಸ್ಥಳೀಯ ಕಾರ್ಪೊರೇಟರ್‌

ಭಯದಿಂದ ದಿನದೂಡುತ್ತಿದ್ದೇವೆ
ಮನೆಯ ಮೇಲಿನ ಗುಡ್ಡದಿಂದ ದೊಡ್ಡ ದೊಡ್ಡ ಕಲ್ಲುಗಳು ಬೀಳುತ್ತಿರುವುದರಿಂದ ಹೆದರಿಕೆಯಾಗುತ್ತಿದ್ದು, ಯಾವಾಗ ಗುಡ್ಡ ಕುಸಿಯುತ್ತದೆ ಎಂಬ ಭೀತಿ ಇದೆ. ಮನೆಯ ಹಿಂಬದಿ ಕಲ್ಲಿನ ತಡೆಗೋಡೆ ಕಟ್ಟಿದಲ್ಲಿ ಮಾತ್ರ ಈ ಸಮಸ್ಯೆಯಿಂದ ಮುಕ್ತ. ಆದರೆ ನಾವು ಆರ್ಥಿಕವಾಗಿ ಅಷ್ಟು ಸುದೃಢರಾಗಿಲ್ಲ.
 -ಕೃಷ್ಣಕುಮಾರ್‌,
   ಮನೆ ಮಾಲಕ

Advertisement

Udayavani is now on Telegram. Click here to join our channel and stay updated with the latest news.

Next