Advertisement

ಬೆಳಗಾವಿಯಲ್ಲಿ ನಕಲಿ‌ ಪತ್ರಕರ್ತರ ಬಳಿಕ ನಕಲಿ ಪೊಲೀಸರು; ಐವರ ಬಂಧನ

10:10 PM Aug 27, 2022 | Team Udayavani |

ಬೆಳಗಾವಿ: ನಾಲ್ವರು ನಕಲಿ‌ ಪತ್ರಕರ್ತರನ್ನು ಬಂಧಿಸಿರುವ ಬೆಳಗಾವಿ ಪೊಲೀಸರು ಈಗ ಐವರು ನಕಲಿ‌ ಪೊಲೀಸರನ್ನು ಬಂಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

Advertisement

ತಾಲೂಕಿನ ಸುಳೇಭಾವಿ ಗ್ರಾಮದ ಜಾಕೀರಹುಸೇನ್ ಕುತ್ಬುದ್ದಿನ್ ಮನಿಯಾರ(42), ಬಸವರಾಜ ಗುರಪ್ಪ ಪಾಟೀಲ(32), ಸರ್ವೇಶ ಮೋಹನ ತುಡವೇಕರ(38), ಸೇಹಲಾಹ್ಮದ ಶಾಹಬುದ್ದಿನ್ ತರಸಗಾರ(41) ಹಾಗೂ ನಯೀಮ್‌ ಮಹ್ಮದಶಫೀ ಮುಲ್ಲಾ(30) ಎಂಬಾತರನ್ನು ಬಂಧಿಸಲಾಗಿದೆ.

ರಾಮತೀರ್ಥ ನಗರದ ಅತಾವುಲ್ಲಾ ಮಹ್ಮದಹಯಾತ್ ಹೊನಗೇಕರ ಎಂಬವರು ಕಾರಿನಲ್ಲಿ ಹೊರಟಿದ್ದಾಗ ಇಂಡಿಕಾ ಕಾರಿನಲ್ಲಿ ಬಂದ ಐವರು ಪೊಲೀಸರು ಎಂದು ಹೇಳಿ ವಾಹನ ತಪಾಸಣೆ ನಡೆಸಿದ್ದಾರೆ.‌ ನಿಮ್ಮ‌ ಕಾರಿನಲ್ಲಿಗಾಂಜಾ ಇದೆ ಎಂದು ಹೇಳಿ, ಕಿತ್ತೂರು ಪೊಲೀಸ್ ಠಾಣೆಗೆ ಬ್ಯಾಗ್ ತೆಗೆದುಕೊಂಡು ಹೋಗುವುದಾಗಿ ಹೇಳಿ 4.79 ಲಕ್ಷ ರೂ.‌ದೋಚಿದ್ದಾರೆ. ಈ ಬಗ್ಗೆ ಅತಾವುಲ್ಲಾ ಕಿತ್ತೂರು ಠಾಣೆಯಲ್ಲಿ ದೂರು ನೀಡಿದ್ದರು.

ತನಿಖೆ ಆರಂಭಿಸಿದ ಪೊಲೀಸರು ಐವರನ್ನು ಬಂಧಿಸಿ 70 ಸಾವಿರ ರೂ.‌ನಗದು ಹಣ ಹಾಗೂ ಇಂಡಿಕಾ ಕಾರು, ನಕಲಿ ಪ್ರೆಸ್ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next