Advertisement

ನಕಲಿ ಲೆಫ್ಟಿನೆಂಟ್‌ ಕರ್ನಲ್‌ ಬಂಧನ

07:53 PM Feb 12, 2022 | Team Udayavani |

ಬೆಂಗಳೂರು: ಲೆಫ್ಟಿನೆಂಟ್‌ ಕರ್ನಲ್‌ ಎಂದು ಹೇಳಿಕೊಂಡು ವಿವೇಕನಗರದ ಹೊನ್ನಾರಪೇಟೆಯಲ್ಲಿರುವ ಆರ್ಮಿ ಸರ್ವೀಸ್‌ ಕಾರ್ಫ್ಸ್ ಸೆಂಟರ್‌(ಎಎಸ್‌ಇ) ಕ್ಯಾಂಪ್‌ಗೆ ಮದ್ಯ ಖರೀದಿಸಲು ಹೋಗಿದ್ದ ಮಾಜಿ ಸೈನಿಕನೊಬ್ಬ ವಿವೇಕನಗರ ಪೊಲೀಸರ ಅತಿಥಿಯಾಗಿದ್ದಾನೆ.

Advertisement

ಕೋರಮಂಗಲ ನಿವಾಸಿ ನೆತಾಯಿಚಾಂದ್‌ ಜಾನ್‌(49) ಬಂಧಿತ. ಪಶ್ಚಿಮ ಬಂಗಾಳ ಮೂಲದ ನಾತಾಯಿಚಾಂದ್‌ ಜಾನ್‌ 1993ರಲ್ಲಿ ಭಾರತೀಯ ಸೇನೆ ಸೇರಿದ್ದ. ಆದರೆ, ಸೇನೆಯಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದೆ ಊರಿಗೆ ವಾಪಸ್‌ ಬಂದಿದ್ದ. ರಜೆ ಮುಗಿದರೂ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಆತನನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ನಂತರ ಬೆಂಗಲೂರಿನ ಕೋರಮಂಗಲಕ್ಕೆ ಬಂದು ಕುಟುಂಬ ಸಮೇತ ವಾಸವಾಗಿದ್ದು, ಈ ಮೊದಲು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.ಒಂದೂ ವರ್ಷದ ಹಿಂದೆ ಲಾರಿಯೊಂದನ್ನು ಖರೀದಿಸಿ ಬಾಡಿಟ್‌ ಬಿಟ್ಟಿದ್ದ.

ತಾನು ಸೇನೆಯಲ್ಲಿದ್ದಾಗ ಲೆಫ್ಟಿನೆಂಟ್‌ ಕರ್ನಲ್‌ ರೀತಿಯ ಸಮವಸ್ತ್ರ ಧರಿಸಿದ ಫೋಟೋ ಪಡೆದುಕೊಂಡಿದ್ದ. ಅದನ್ನೇ ಉಪಯೋಗಿಸಿ ನಕಲಿ ಗುರುತಿನ ಚೀಟಿ ಮಾಡಿಕೊಂಡು ಕೆಲವೆಡೆ ಓಡಾಡುತ್ತಿದ್ದ. ಮದ್ಯ ವ್ಯಸನಿಯಾಗಿರುವ ಜಾನ್‌, ಸೇನೆಯ ಬ್ರ್ಯಾಡೆಂಡ್‌ ಮದ್ಯ ಖರೀದಿಗೆ ಆರ್ಮಿ ಕ್ಯಾಂಪಸ್‌ಗೆ ಶುಕ್ರವಾರ ಬಂದಿದ್ದಾನೆ. ಈ ವೇಳೆ ಆತನ ನಡವಳಿಕೆಯಿಂದ ಅನುಮಾನಗೊಂಡ ಕ್ಯಾಂಪಸ್‌ನ ಸಿಬ್ಬಂದಿ ಗುರುತಿನ ಚೀಟಿ ಪರಿಶೀಲಿಸಿದ್ದಾರೆ.ಈ ವೇಳೆ ಅದು ನಕಲಿ ಎಂಬುದು ಗೊತ್ತಾಗಿದೆ. ಕೂಡಲೇ ವಿವೇಕನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ, ಉತ್ತಮ ಮದ್ಯ ಸಿಗುತ್ತದೆ ಎಂಬ ಕಾರಣಕ್ಕೆ ನಕಲಿ ಗುರುತಿನ ಚೀಟಿ ಬಳಸಿಕೊಂಡೆ ಎಂದು ಹೇಳಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next