Advertisement

ಏ. 12ರಿಂದ ಕತಕನಹಳ್ಳಿ  ಜಾತ್ರೆ-ವಿವಿಧ ಕಾರ್ಯಕ್ರಮ: ಶಿವಯ್ಯ ಶ್ರೀ

07:41 PM Mar 13, 2021 | Adarsha |

ವಿಜಯಪುರ: ಕಳೆದ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಕತಕನಹಳ್ಳಿ ಸದಾಶಿವ ಮುತ್ಯಾನ ಜಾತ್ರಾ ಮಹೋತ್ಸವ ಸಾಂಕೇತಿಕವಾಗಿ ಆಚರಿಸಲ್ಪಟ್ಟಿತ್ತು. ಪ್ರಸಕ್ತ ವರ್ಷ ಏ. 12ರಿಂದ ಕೋವಿಡ್‌ ನಿಯಮ ಪಾಲನೆ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಜಾತ್ರೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ಶಿವಯ್ಯ ಶ್ರೀಗಳು ತಿಳಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 11ರಂದು ಶಿವರಾತ್ರಿ ದಿನ ಶ್ರೀಮಠದಲ್ಲಿ ನಡೆದ ಭಕ್ತರ ಸಭೆಯಲ್ಲಿ ಈ ಬಾರಿ ಏ. 12ರಿಂದ ಸದಾಶಿವ ಮುತ್ಯಾನ ಜಾತ್ರೆಯನ್ನು ಕೋವಿಡ್‌ ನಿಯಮ ಪಾಲನೆ ಸಹಿತ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ಜಾತ್ರೆಗೆ ಬರುವ ಜನರಿಗೆ ತೊಂದರೆ ಆಗದಂತೆ, ಕೊರೊನಾ ಸೋಂಕು ಹರಡದಂತೆ ಸಾಮಾಜಿಕ ಅಂತರ, ಶಿಸ್ತು, ಸ್ವತ್ಛತೆ, ಮಾಸ್ಕ್ ಧರಿಸುವಂತ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಜಾತ್ರೆಗೆ ಬರುವ ಸದ್ಭಕ್ತರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸ್ವಯಂ ಸೇವಕರ ರೀತಿ ವಿಶೇಷ ರೀತಿಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕು. ಸದಾಶಿವನ ಸಂದೇಶ, ಸರ್ಕಾರದ ಆದೇಶವನ್ನು ಪಾಲಿಸುವುದಾಗಿ ಭಕ್ತಾದಿಗಳು ಭರವಸೆ ನೀಡಿದ್ದಾರೆ ಎಂದರು.

ಜಾತ್ರೆ ಕುರಿತು ವಿವರ ನೀಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶಟ್ಟಿ, ಏ. 12ರಿಂದ ಸದಾಶಿವ ಮುತ್ಯಾನ ಜಾತ್ರೆಗೆ ಅ ಧಿಕೃತ ಚಾಲನೆ ದೊರೆಯಲಿದೆ. ಈ ವರ್ಷ ಸರ್ಕಾರದ ನಿಯಮ ಪಾಲನೆ ಸಹಿತ ದನಗಳ ಜಾತ್ರೆ, ಸರಳ ಸಾಮೂಹಿಕ ವಿವಾಹ, ಕೃಷಿ ವಸ್ತು ಪ್ರದರ್ಶನ, ಗ್ರಾಮೀಣ ಕ್ರೀಡಾ ಸ್ಪರ್ಧೆ ಆಯೋಜಿಸಲಾಗಿದೆ.

ಏ. 12ರಂದು ಸಂಜೆ 4ಕ್ಕೆ ಕೆಸರು ಓಟದ ಸ್ಪರ್ಧೆ, ಏ. 13ರಂದು ಚಾಣಕ್ಯ ಕರಿಯರ್‌ ಅಕಾಡೆಮಿ ನೇತೃತ್ವದಲ್ಲಿ ರಸ ಪ್ರಶ್ನೆ, ಏ. 14ರಂದು ಬೆಳಗ್ಗೆ 9ರಿಂದ ಪಲ್ಲಕ್ಕಿ ಉತ್ಸವ, ಆರೇತ್ತಿನ ನೇಗಿಲು ಜಗ್ಗುವ ಸ್ಪರ್ಧೆ ನಡೆಯಲಿದೆ. ಸಂಜೆ ವೈಭವದಿಂದ ರಥೋತ್ಸವ ಜರುಗಲಿದೆ ಎಂದರು.

Advertisement

ಏ. 15ರಂದು ಸರಳ ಸಾಮೂಹಿಕ ವಿವಾಹ, ಶ್ರೀಗಳಿಂದ ಕಾಲಜ್ಞಾನದ ಹೇಳಿಕೆ ನಡೆಯಲಿದ್ದು, ಏ. 16ರಂದು ಬೆಳಗ್ಗೆ 11ಕ್ಕೆ ಗ್ರಾಮೀಣ ಸಾಹಸ ಕ್ರೀಡೆಯಾದ ಭಾರ ಎತ್ತುವ ಸ್ಪರ್ಧೆ, ಜಂಗೀ ಕುಸ್ತಿ ನಡೆಯಲಿವೆ. ಸಂಜೆ 7ಕ್ಕೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಮದ್ದುಸುಡುವ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.

ಈ ಬಾರಿ ಜಾನುವಾರು ಜಾತ್ರೆಗೆ ವಿಶೇಷ ಒತ್ತು ನೀಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಎಲ್ಲೂ ಜಾನುವಾರು ಜಾತ್ರೆ ನಡೆದಿಲ್ಲ. ಸಿದ್ದೇಶ್ವರ ಜಾತ್ರೆಯ ಜಾನುವಾರು ಜಾತ್ರೆ, ಫಂಡರಪುರ ಜಾತ್ರೆಯೂ ನಡೆದಿಲ್ಲ. ಇದರಿಂದ ರೈತರಿಗೆ ತೊಂದರೆಯಾಗಿದ್ದು, ಕತಕನಹಳ್ಳಿ ಜಾತ್ರೆಯಲ್ಲಿ ಮೊದಲ ಬಾರಿಗೆ ಜಾನುವಾರು ಜಾತ್ರೆ ಹಮ್ಮಿಕೊಂಡು ರೈತರಿಗೆ ಅನುಕೂಲ ಕಲ್ಪಿಸಲಾಗಿದೆ.

ಇದಕ್ಕಾಗಿ ರಾಸುಗಳಿಗೆ ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ ಸೇರಿದಂತೆ ಅಗತ್ಯ ಇರುವ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಸುಕ್ಷೇತ್ರ ಕತಕನಹಳ್ಳಿ ಮಠಕ್ಕೆ ಶ್ರೇಷ್ಠ ಆಧ್ಯಾತ್ಮಿಕ ಪರಂಪರೆ ಇದೆ. ರೈತರಿಗೆ ಅನುಕೂಲವಾಗುವ ಕಾರ್ಯಕ್ರಮ, ಕೆಸರಿನ ಓಟದಂತಹ ಗ್ರಾಮೀಣ ಕ್ರೀಡೆಗಳಿಗೆ ಪೊÅàತ್ಸಾಹ, ಸರಳ ಸಾಮೂಹಿಕ ವಿವಾಹ, ಪ್ರವಚನಾಮೃತ ಹೀಗೆ ಅನೇಕ ರೀತಿಯಿಂದಲೂ ಜಾತ್ರೆ ವೈಶೀಷ್ಟÂತೆಯಿಂದ ನಡೆಯುತ್ತಾ ಬಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next