Advertisement

ಹೊಸಲುಮಾರಮ್ಮನ ಜಾತ್ರೆ ಮಹೋತ್ಸವ

04:21 PM Mar 30, 2021 | Team Udayavani |

ಹುಣಸೂರು: ತಾಲೂಕಿನ ಮಲ್ಲಿನಾಥಪುರ ಬಳಿಯ ಹೊಸಲು ಮಾರಮ್ಮದೇವಿ ಜಾತ್ರಾ ಮಹೋತ್ಸವವು ಕೋವಿಡ್  ಹಿನ್ನೆಲೆಯಲ್ಲಿ ಸರಳವಾಗಿ ಶ್ರದ್ಧಾಭಕ್ತಿಯಿಂದ ನಡೆಯಿತು.

Advertisement

ಮಾರಮ್ಮ ದೇವಸ್ಥಾನದ ಮೇಲೆ ಜೀವಂತ ಕೋಳಿ ಎಸೆದು ಹರಕೆ ತೀರಿಸುವ ವಿಶಿಷ್ಟ ಜಾತ್ರೆ ಇದಾಗಿದ್ದು, ತಹಶೀಲ್ದಾರ್‌ ಸೂಚನೆಯಂತೆ ಸುತ್ತ ಏಳುಊರಿನ ಜನರು ಸೇರಿ ಈ ಜಾತ್ರೆ ನಡೆಸಿದರು. ಮೊದಲಿಗೆ ಹುಣಸೂರು ಖಜಾನೆಯಲ್ಲಿ ಇಟ್ಟಿದ್ದ ದೇವರ ಭಂಡಾರವನ್ನು ಶನಿವಾರವೇ ಮಲ್ಲಿನಾಥಪುರದಲ್ಲಿರುವ ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಲಾಯಿತು. ಸೋಮವಾರ ಮುಂಜಾನೆಯಿಂದಲೇ ದೇವಾಲಯದಲ್ಲಿ ದೇವಿಗೆ ವಿವಿಧ ಪೂಜಾ ಕೈಂಕರ್ಯ ನಡೆದವು. ಆನಂತರ ಸಂಪ್ರದಾಯದಂತೆ ಬೀರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಚಿನ್ನಾಭರಣ, ಬೆಳ್ಳಿಯ ಮುಖವಾಡ ಹಾಕಿ, ಅಲಂಕರಿಸಿ 2 ಕಿ.ಮೀ. ದೂರದ ದೇವಾಲಯಕ್ಕೆ ಮಲ್ಲಿನಾಥಪುರದಿಂದ ಬರಿಗಾಲಲ್ಲಿ ಮೆರವಣಿಗೆ ಮೂಲಕ ಭಕ್ತರು ಆಗಮಿಸಿದರು.

ಏಳು ಊರಿನ ಜನ: ದೇವಸ್ಥಾನದವರೆಗೆ ಬಾಯಿಗೆಬೀಗಹಾಕಿ ಕೊಂಡಿದ್ದವರು, ಭಕ್ತರು ಕೊಂಬು, ಕಹಳೆ, ಟಮಟೆ, ಮಂಗಳ ವಾದ್ಯಕ್ಕೆ ತ‌ಕ್ಕಂತೆ ನೃತ್ಯ ಮಾಡುತ್ತ ದಾರಿಯುದ್ದಕ್ಕೂ ಈಡುಗಾಯಿ ಒಡೆದು ಜಾತ್ರಾ ಮಾಳಕ್ಕೆ ಆಗಮಿಸಿದರು. ಸುತ್ತಮುತ್ತಲಿನ ‌ ಏಳೂರಿನಜನರು ಮಾತ್ರವೇ ಈ ಜಾತ್ರೆಯಲ್ಲಿ ಭಾಗವಹಿಸಿದ್ದರು.ದಾರಿಯುದ್ದಕ್ಕೂ ಈಡುಗಾಯಿ: ಮಲ್ಲಿನಾಥಪುರದಿಂದ ಮಾರಮ್ಮನ ಆಯುಧ, ಒಡವೆ ಇಡುವ ಪೆಟ್ಟಿಗೆ(ಕುರ್ಜು)ಯನ್ನು ಹುಲಿವಾಹನದಲ್ಲಿರಿಸಿ, ನಂದಿಕಂಬ ಹೊತ್ತು ಉತ್ಸವಮೂರ್ತಿಯೊಂದಿಗೆರಸ್ತೆಯುದ್ದಕ್ಕೂ ಈಡುಗಾಯಿ ಒಡೆಯುತ್ತ ಸಾಗಿಬಂದರೆ, ಮತ್ತೂಂದೆಡೆ ವೀರಗಾಸೆ ಕುಣಿತ, ಗುಡ್ಡದಕುಣಿತ, ಕಾಡು ಗುಡ್ಡರ ಕುಣಿತದೊಂದಿಗೆಬೀರೇಶ್ವರಸ್ವಾಮಿಗೆ ಉಘೇ ಉಘೇ ಎಂದು ಘೋಷಣೆ ಕೂಗುತ್ತ ಭಕ್ತರು ಭಕ್ತಿ-ಭಾವ ಮೆರೆದರು. ಮಹಿಳೆಯರು ತಲೆ ಮೇಲೆ ತಂಬಿಟ್ಟು ಹೊತ್ತಿದ್ದರೆ  , ಕೆಲವರು ಬಾಯಿಗೆ ಬೀಗ ಹಾಕಿಸಿಕೊಂಡು ದೇವರಿಗೆಹರಕೆ ತೀರಿಸಿದ್ದರು.

ಜೀವಂತ ಕೋಳಿ ಎಸೆದರು: ಮಧ್ಯಾಹ್ನದ ವೇಳೆಗೆ ದೇವರ(ಕುರ್ಜು) ಮೆರವಣಿಗೆ ದೇವಸ್ಥಾನದ ಬಳಿಗೆ ಆಗಮಿಸುತ್ತಿದ್ದಂತೆ ಹರಕೆ ಹೊತ್ತಿದ್ದ ಭಕ್ತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸಾಂಕೇತಿಕವಾಗಿಜೀವಂತಕೋಳಿಯನ್ನು ದೇವಾಲಯದ ಮೇಲೆ ಎಸೆದರೆ, ದೇವಸ್ಥಾನದ ಎದುರು ದೇವಾಲಯಕ್ಕೆ ಸಂಬಂಧಿಸಿದ ಸುತ್ತಮುತ್ತಲ ಏಳೂರಿನ ಮುಖಂಡರು ಕುರಿಮರಿ ಬಲಿ ಕೊಟ್ಟು ಹರಕೆ ಸಲ್ಲಿಸಿದರು.

ಏಳೂರಿನ ಗ್ರಾಮದೇವತೆ: ಹೊಸಲುಮಾರಮ್ಮ ದೇವಸ್ಥಾನ ಸುತ್ತಮುತ್ತಲಿನ ಏಳು ಗ್ರಾಮಕ್ಕೆ ಸೇರಿದ್ದಾಗಿದ್ದು, ಜಾತ್ರಾ ಮಹೋತ್ಸವ ‌ಕ್ಕೆ ಮಲ್ಲಿನಾಥಪುರ,ಬಿಳಿಕೆರೆ, ಬೋಳನಹಳ್ಳಿ-ರಾಮೇನಹಳ್ಳಿ, ರಂಗಯ್ಯನ ಕೊಪ್ಪಲು, ಎಮ್ಮೆಕೊಪ್ಪಲು, ಮೈದನಹಳ್ಳಿ ಗ್ರಾಮಸ್ಥರು ಬಿರುಬೀಸಲು ತಾಳಲಾರದೇ ದೇವಾಲಯದ ಆವರಣದ ಸುತ್ತಲಿನ ‌ಲ್ಲಿರುವ ಮರದ ನೆರಳಲ್ಲಿ ನಿಂತುದೇವರ ಮೆರವಣಿಗೆ ವೀಕ್ಷಿಸಿ, ಪೂಜೆ ಸಲ್ಲಿಸಿದರು.ಸಂಜೆ ಮತ್ತೆ ದೇವರಿಗೆ ಸಂಬಂಧಿಸಿದಒಡವೆ(ಭಂಡಾರ), ಆಯುಧ ಸೇರಿ ಎಲ್ಲವನ್ನೂಮೆರವಣಿಗೆಯಲ್ಲಿ ತಂದು, ಗ್ರಾಮದಲ್ಲಿ ಪೂಜೆ ಸಲ್ಲಿಸಿದ ನಂತರ ಸ್ವಸ್ಥಾನದಲ್ಲಿರಿಸಿದರು.

Advertisement

ಪೊಲೀಸ್‌ ನಿರೀಕ್ಷಕ ರವಿಕುಮಾರ್‌, ಎಸ್‌ಐ ರಾಮಚಂದ್ರ ನಾಯಕ ನೇತೃತದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು‌ . ತಹಶೀಲ್ದಾರ್‌ ಬಸವರಾಜ್‌ ಸರಳವಾಗಿ ಆಚರಿಸಲು ಮನವಿ ಮಾಡಿದ್ದರಿಂದ ಹೊರಗಿನ ಭಕ್ತರ ‌ ಆಗಮಿಸಿರಲಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next