Advertisement

ಕೋವಿಡ್ ವಾರಿಯರ್ಸ್ ಗಳಿಗೆ ಯಮಕನಮರಡಿ ಗ್ರಾಮಸ್ಥರಿಂದ ಮಾಲೆ ಹಾಕಿ, ಆರತಿ ಬೆಳಗಿ ಗೌರವ

01:48 PM Apr 25, 2020 | keerthan |

ಬೆಳಗಾವಿ: ಮಹಾಮಾರಿ ಕೋವಿಡ್-19 ವಿರುದ್ಧ ಹಗಲಿರುಳು ಹೋರಾಡುತ್ತಿರುವ ಪೊಲೀಸರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸೇವೆಗೆ ಗೌರವ ನೀಡುವ ನಿಟ್ಟಿನಲ್ಲಿ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮಸ್ಥರು ಪೊಲೀಸರಿಗೆ ಆರತಿ ಬೆಳಗಿ, ಹಾರ ಹಾಕಿ ಗೌರವ ವಂದನೆ ಸಲ್ಲಿಸಿದರು.

Advertisement

ಯಮಕನಮರಡಿ ಬ್ಲಾಕ್ ಯೂಥ್ ಕಾಂಗ್ರೆಸ್ ಅಧ್ಯಕ್ಷ ಕಿರಣ ಸಿಂಗ್ ರಜಪೂತ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಯಮಕನಮರಡಿ ಪಿಎಸ್ ಐ ರಮೇಶ ಪಾಟೀಲ ಹಾಗೂ ಸಿಬ್ಬಂದಿ, ಆಶಾ-ಅಂಗನವಾಡಿ ಕಾರ್ಯಕರ್ತರಿಗೆ ಗೌರವ ಸೂಚಿಸಲಾಯಿತು.

ಗ್ರಾಮದ‌ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿ ಕೋವಿಡ್-19 ವಾರಿಯರ್ಸ್ ಗೆ‌ ಗ್ರಾಮಸ್ಥರು ಅದ್ಧೂರಿಯಾಗಿ ಗೌರವ ವಂದನೆ ಸಲ್ಲಿಸಿದರು. ತಮ್ಮ ಮನೆಗಳ‌ ಎದುರು ಗ್ರಾಮಸ್ಥರು ಕೋವಿಡ್ ವಾರಿಯರ್ಸ್ ಗಳಿಗೆ ಮಾಲೆ ಹಾಕಿ ಆರತಿ ಬೆಳಗಿದರು.

ಯಮಕನಮರಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಓಂಕಾರ್ ತುಬಚಿ, ಗ್ರಾಪಂ ಸದಸ್ಯ ಗುಲಾಬ್ ಸಿಂಗ್ ರಜಪೂತ್, ಶಿವಶಂಕರ ಝುಟ್ಟಿ, ಗಿರೀಶ ಮಿಶ್ರಿಕೋಟಿ, ದೇವಪ್ಪ ಹೊನ್ನೂರಿ,  ಶಶಿಕಾಂತ ಮೇತ್ರ,  ಅಸ್ಲಂ ಪಕಾಲಿ,  ಸದಾನಂದ ಗುಡಿಕಡೆ, ಜಾವೇದ ಜಕಾತಿ, ಸಮೀರ್ ಸೊಲ್ಲಾಪುರಿ, ಪ್ರಕಾಶ ಬರಗಾಲಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next