Advertisement

ಯಾವುದರಲ್ಲಿ ಹೊಡಿತಾರೋ ಅದರಲ್ಲಿಯೇ ಹೊಡೆದು ಒಂದಕ್ಕೆ ಎರಡು ತೆಗೆದುಬಿಡಿ: ಈಶ್ವರಪ್ಪ

04:53 PM Aug 08, 2021 | Team Udayavani |

ಶಿವಮೊಗ್ಗ: ಹಿಂದೆ ಬಿಜೆಪಿ ಕಾರ್ಯಕರ್ತರನ್ನು ಹೊಡೆದರೆ ವಾಪಸ್ ಹೊಡೆಯೋದಕ್ಕೆ ನಮಗೆ ಶಕ್ತಿ ಇರಲಿಲ್ಲ. ಆದರೆ ಇವತ್ತು ಲಕ್ಷ ಲಕ್ಷ ಜನರು ನಮ್ಮ ಪಕ್ಷದ ಪರವಾಗಿ ಇದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

Advertisement

ನಗರದಲ್ಲಿ‌ ನಡೆದ ಬಿಜೆಪಿ ನಗರ ಕಾರ್ಯಕಾರಿಣಿ ಸಭೆಯಲ್ಲಿ‌ ಮಾತನಾಡಿದ ಅವರು, ಹಿಂದುತ್ವದ ಮೆರವಣಿಗೆ ಎಂದರೆ ಅದನ್ನು ಊಹೆ ಮಾಡಲೂ ಆಗುತ್ತಿರಲಿಲ್ಲ. ನಮ್ಮ ಕಾರ್ಯಕರ್ತರನ್ನು ಕೊಲೆ ಮಾಡುತ್ತಿದ್ದರು. ಆಗ ನಮ್ಮ ಹಿರಿಯರು ಬಿ ಕಾಮ್ ಎಟ್ ಆಲ್ ಕಾಸ್ಟ್ ಎಂದು ಹೇಳುತ್ತಿದ್ದರು. ಅಂದರೆ ಎಂತಹ ಸಂದರ್ಭದ ಬಂದರೂ ಸಹ ಶಾಂತವಾಗಿರಿ. ಹೊಡಿಲಿ, ಬಡಿಲಿ, ಕೊಲೆ ಮಾಡಲಿ. ಯಾಕೆ ಅಂದ್ರೆ ನಮ್ಮ ಬಳಿ ಶಕ್ತಿ ಇರಲಿಲ್ಲ ಎಂದು ಈಶ್ವರಪ್ಪ ಹೇಳಿದರು.

ಇದನ್ನೂ ಓದಿ:ಗೊಂದಲವಿಲ್ಲ, ಆನಂದ್ ಸಿಂಗ್-ಎಂಟಿಬಿ ಅವರ ಭಾವನೆಗಳನ್ನು ಹೇಳಿದ್ದಾರಷ್ಟೇ: ಈಶ್ವರಪ್ಪ

ಇವತ್ತು ಇಡೀ ಪ್ರಪಂಚದಲ್ಲಿ ಬಿಜಿಪಿ ಪಾರ್ಟಿ ಹೇಗೆ ಬೆಳೆದಿದೆ ಅಂತ ಎಲ್ಲರಿಗೂ ಗೊತ್ತಿದೆ. ಇವತ್ತು ಯಾರು ಯಾವುದೇ ಮೂಲೆಯಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತನ ಮೈ ಮುಟ್ಟಿದರೆ ಅವತ್ತು ಬಿ ಕಾಮ್ ಎಟ್ ಆಲ್ ಕಾಸ್ಟ್ ಅಂತ ಇತ್ತು ಆದರೆ ಈಗ ಫೇಸ್ ವಿದ್ ದಿ ಸೇಮ್ ಸ್ಟಿಕ್. ಯಾವುದರಲ್ಲಿ ಹೊಡಿತಾರೋ ಅದರಲ್ಲಿಯೇ ಹೊಡೆದು ಒಂದಕ್ಕೆ ಎರಡು ತೆಗೆದು ಬಿಡಿ. ಹೇಳುವುದು ಬೇಡ ಯಾಕಂದರೆ ಪಕ್ಷ ಅಷ್ಟು ಬೆಳೆದು‌ ಬಿಟ್ಟಿದೆ. ಈಗ ನಮ್ಮ ಸುದ್ದಿಗೆ ಯಾರು ಬರುವುದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next