Advertisement

ಪರೀಕ್ಷೆಯನ್ನು ಸ್ಪರ್ಧಾತ್ಮಕವಾಗಿ ಎದುರಿಸಿ

04:01 PM Feb 09, 2020 | Suhan S |

ಚನ್ನಪಟ್ಟಣ: ಮುಂಬರುವ ಎಸ್‌ಎಸ್‌ ಎಲ್‌ಸಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳು ಸನ್ನಧ ರಾಗಬೇಕೆಂದು ತಾಲೂಕು ತಹಶೀಲ್ದಾರ್‌ ಸುದರ್ಶನ್‌ ಹೇಳಿದರು.

Advertisement

ಪಟ್ಟಣದ ಎಲೇಕೇರಿ ಮೊರಾರ್ಜಿ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದ್ದ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಒಂದು ದಿನದ ಪುನರ್ಬಲನ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ಓದಿನ ಕಡೆ ಹೆಚ್ಚು ಗಮನ ನೀಡಬೇಕು. ಪೋಷಕರು ಮಕ್ಕಳ ಮೇಲೆ ಯಾವುದೇ ರೀತಿಯ ಒತ್ತಡನೀಡಬಾರದು ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಮುಖ ಘಟ್ಟವಾಗಿದ್ದು, ಪರೀಕ್ಷೆಯನ್ನು ಸ್ಪರ್ಧಾತ್ಮಕವಾಗಿ ತಗೆದುಕೊಂಡು ಭಯ ಅಂಜಿಕೆ ಬಿಟ್ಟು ಶಾಲೆಯಲ್ಲಿ ಶಿಕ್ಷಕರು ನೀಡಿದ ಬೋಧನೆಯನ್ನು ಸಮರ್ಥವಾಗಿ ತಮ್ಮ ಜಾnಪಕ ಶಕ್ತಿಯಲ್ಲಿಇಟ್ಟುಕೊಂಡು ಮನನ ಮಾಡಿ ಕೊಳ್ಳಬೇಕು ಎಂದರು. ಪರಿಶ್ರಮವನ್ನು ವಿದ್ಯಾಭ್ಯಾಸದ ಕಡೆ ಗಮನ ನೀಡಿದಾಗ ಮಾತ್ರ ನಿಮ್ಮ ಮುಂದಿನ ಭವಿಷ್ಯವು ಉಜ್ವಲವಾಗಲು ಸಾಧ್ಯ. ಇಲ್ಲದಿದ್ದರೆ, ನಿಮ್ಮ ಭವಿಷ್ಯ ಡೋಲಾಯಮಾನವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಸಿದರು.

ವಿದ್ಯಾರ್ಥಿಗಳಿಗೆ ಸುಲಭವಾಗಿ ಪರೀಕ್ಷೆ ಎದುರಿಸುವ ಸಾಮರ್ಥ್ಯವನ್ನು ಶಿಕ್ಷಕರು ತುಂಬಬೇಕು ಎಂದು ತಾಪಂ ಅಧ್ಯಕ್ಷ ಎಚ್‌.ರಾಜಣ್ಣ ತಿಳಿಸಿದರು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅ ಧಿಕಾರಿ ಬಸವರಾಜು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಸಿ.ಆರ್‌.ಪಿ.ರಾಜಶೇಖರ್‌, ವಸತಿ ಮೇಲ್ವಿಚಾರಕ ಅರುಣ್‌ಕುಮಾರ್‌, ಮುಖ್ಯ ಶಿಕ್ಷಕ ಸತೀಶ್‌ ಹಾಗೂ ಮುಖಂಡರು, ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next