Advertisement

ಉಗ್ರ ಯಾಸಿನ್‌ ಮಲಿಕ್‌ ಖುದ್ದು ಹಾಜರು: ಕೇಂದ್ರ ಕಳವಳ

10:22 PM Jul 21, 2023 | Team Udayavani |

ನವದೆಹಲಿ: ಯಾವುದೇ ಆದೇಶ ಇಲ್ಲದಿದ್ದರೂ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್‌ ಫ್ರಂಟ್‌(ಜೆಕೆಎಲ್‌ಎಫ್) ಕಮಾಂಡರ್‌, ಉಗ್ರ ಯಾಸಿನ್‌ ಮಲಿಕ್‌ ಶುಕ್ರವಾರ ಸುಪ್ರೀಂ ಕೋರ್ಟ್‌ ಎದುರು ಖುದ್ದು ಹಾಜರಾದರು. ಯಾಸಿನ್‌ ಮಲಿಕ್‌ ಖುದ್ದು ಹಾಜರಾತಿ ಕುರಿತು ಕಳವಳ ವ್ಯಕ್ತಪಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಈ ಕುರಿತು ಸುಪ್ರೀಂ ಕೋರ್ಟ್‌ ಗಮನ ಸೆಳೆದರು.

Advertisement

ನ್ಯಾ. ಸೂರ್ಯಕಾಂತ್‌ ಮತ್ತು ನ್ಯಾ. ದೀಪಂಕರ್‌ ದತ್ತ ಅವರಿದ್ದ ನ್ಯಾಯಪೀಠ, ಈ ವಿಷಯವನ್ನು ಪರಿಗಣಿಸಲು ನಿರಾಕರಿಸಿತು. ಆದರೆ ಖುದ್ದು ಹಾಜರಿಯ ಯಾವುದೇ ಆದೇಶ ನೀಡಿಲ್ಲ ಎಂದು ಸ್ಪಷ್ಟಪಡಿಸಿತು. ಕಾರಾಗೃಹದಿಂದ ಮಲಿಕ್‌ ಹೊರಗೆ ಕರೆತರದಂತೆ ಕೇಂದ್ರ ಗೃಹ ಸಚಿವಾಲಯ ಈ ಹಿಂದೆಯೇ ಆದೇಶ ಹೊರಡಿಸಿದೆ. ಇದೇ ವೇಳೆ, “ಇದೊಂದು ಗಂಭೀರ ಭದ್ರತಾ ವಿಷಯ’ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ.ರಾಜು ಹೇಳಿದರು. ನಾಲ್ವರು ಐಎಎಫ್ ಅಧಿಕಾರಿಗಳ ಹತ್ಯೆ ಮತ್ತು 1989ರ ರುಬಯ್ಯ ಸಯೀದ್‌ ಅಪಹರಣ ಪ್ರಕರಣದಲ್ಲಿ ಮಲಿಕ್‌ ಖುದ್ದು ಹಾಜರಿಗೆ ಜಮ್ಮು ಕೋರ್ಟ್‌ ಆದೇಶಿಸಿತು. ಆದರೆ ಸುಪ್ರೀಂ ಕೋರ್ಟ್‌ ಈ ಆದೇಶಕ್ಕೆ ತಡೆ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next