Advertisement

ದೆಹಲಿ ಅಗ್ನಿ ಅವಘಡ ‘ಅತ್ಯಂತ ಭಯಾನಕ’: ಮೋದಿ, ಶಾ ಸಂತಾಪ

09:46 AM Dec 09, 2019 | keerthan |

ಹೊಸದಿಲ್ಲಿ: ಇಲ್ಲಿನ ರಾಣಿ ಜಾನ್ಸಿ ರಸ್ತೆಯಲ್ಲಿರುವ ಅನಜ್ ಮಂಡಿ ಪ್ರದೇಶದಲ್ಲಿ ಇಂದು ಮುಂಜಾನ ನಡೆದ ಅಗ್ನಿ ಅವಗಢಕ್ಕೆ ಪ್ರಧಾನಿ ನರೇಂದ್ರ ಮೋದಿ ಆಘಾತ ವ್ಯಕ್ತಪಡಿಸಿದ್ದಾರೆ. ಈ ಅಗ್ನಿ ಅವಘಡವನ್ನು ಅತ್ಯಂತ ಭಯಾನಕ ಎಂದಿರುವ ಮೋದಿ, ಮಡಿದವರಿಗೆ ಸಂತಾಪ ಸೂಚಿಸಿದ್ದಾರೆ.

Advertisement

ಈ ಅವಘಡದಲ್ಲಿ ಮಡಿದ ಕಾರ್ಮಿಕರಿಗೆ ನನ್ನ ಸಂತಾಪಗಳು. ಅವರ ಕುಟುಂಬದವರಿಗೆ ಭಗವಂತ ದುಖ ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ.

ಘಟನಾ ಸ್ಥಳಕ್ಕೆ ಅಗತ್ಯ ನೆರವು ನೀಡಲು ಅಧಿಕಾರಿಗಳು ನೀಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಗೃಹ ಸಚಿವ ಅಮಿತ್ ಶಾ ಕೂಡಾ ಟ್ವೀಟ್ ಮಾಡಿದ್ದು, ದೆಹಲಿ ಅಗ್ನಿ ಅವಘಡದ  ಮಾಹಿತಿ ತಿಳಿದು ತೀವ್ರ ದುಖವಾಗುತ್ತಿದೆ. ಪ್ರಾಣ ಕಳೆದುಕೊಂಡ ಕಾರ್ಮಿಕರ ಕುಟುಂಬ ವರ್ಗದವರಿಗೆ ನನ್ನ ಸಂತಾಪಗಳು ಎಂದಿದ್ದಾರೆ.

ಘಟನೆಯಲ್ಲಿ ಇದುವರೆಗೆ 43 ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next