Advertisement

ಪಠ್ಯೇತರ ಚಟುವಟಿಕೆಗಳಿಂದ ಒತ್ತಡ ನಿವಾರಣೆ, ಆತ್ಮವಿಶ್ವಾಸ ವೃದ್ಧಿ

06:40 AM Jul 24, 2017 | Team Udayavani |

ಕಾಪು: ಸಾಹಿತ್ಯ, ಸಂಗೀತ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಅವರ ಮಾನಸಿಕ ಒತ್ತಡ ನಿವಾರಣೆಯಾಗಿ ಆತ್ಮವಿಶ್ವಾಸ ವೃದ್ಧಿಸುತ್ತದೆ ಎಂದು ಉದ್ಯಾವರ ಸ. ಪ. ಪೂ. ಕಾಲೇಜಿನ ಪ್ರಾಂಶುಪಾಲ ಮಹೇಂದ್ರ ಎನ್‌. ಶರ್ಮ ಹೇಳಿದರು.

Advertisement

ಉದ್ಯಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿವಿಧ ಸಂಘಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಸ್‌. ಡಿ. ಎಂ. ಸಿ. ಸದಸ್ಯ ಪ್ರತಾಪ್‌ ಕುಮಾರ್‌ ಮತ್ತು ಭವಾನಿಶಂಕರ ಭಜನಾ ಮಂಡಳಿಯ ಅಧ್ಯಕ್ಷ ಶೇಖರ ಬಂಗೇರ, ನಿಕಟಪೂರ್ವ ಅಧ್ಯಕ್ಷ ತನಿಯ, ಸಲಹೆಗಾರ ಕೃಷ್ಣ ಎಲ್‌. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವಿವಿಧ ಸಂಘಗಳ ಮಾರ್ಗದರ್ಶಕರಾದ ಸುಭಾಷ್‌ ಚೌಹಾನ್‌, ರವೀಂದ್ರ ನಾಯಕ್‌, ಪ್ರಭಾ ಬಿ., ಶಕುಂತಲಾ, ಪಂಚಾಕ್ಷರೀ ಎ. ವಿ., ಜಯಾ ತಂತ್ರಿ ಕೆ. ಉಪಸ್ಥಿತರಿದ್ದರು.ಪ್ರೌಢಶಾಲ ಮುಖ್ಯ ಶಿಕ್ಷಕಿ ಮೂಕಾಂಬೆ ಸ್ವಾಗತಿಸಿದರು. ವಿದ್ಯಾರ್ಥಿ ವಿಶಾಂತ್‌ ವಂದಿಸಿದರು. ವಿದ್ಯಾರ್ಥಿ ರೋಹನ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next