Advertisement

UCC ಸಮಿತಿ ಅವಧಿ ವಿಸ್ತರಣೆ

08:30 PM Sep 23, 2023 | Team Udayavani |

ಡೆಹ್ರಾಡೂನ್‌: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಂಬಂಧಿಸಿದಂತೆ ಕರಡು ರೂಪಿಸಲು ರಚಿಸಿರುವ ಸಮಿತಿಯ ಅವಧಿಯನ್ನು ಮತ್ತೆ ನಾಲ್ಕು ತಿಂಗಳಿಗೆ ವಿಸ್ತರಿಸಲಾಗಿದೆ.

Advertisement

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್‌ ದೇಸಾಯಿ ಅವರ ನೇತೃತ್ವದಲ್ಲಿ ಈ ಸಮಿತಿ ರಚಿಸಲಾಗಿದೆ. ಈ ವರ್ಷ ಜೂನ್‌ನಲ್ಲಿಯೇ ಅದನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕಿತ್ತು. ಆದರೆ, ಪರಿಶೀಲನೆ ಬಾಕಿ ಇರುವ ಹಿನ್ನೆಲೆ ಈ ಹಿಂದೆಯೂ ಎರಡು ಬಾರಿ ಸಮಿತಿ ಅವಧಿಯನ್ನು ವಿಸ್ತರಿಸಲಾಗಿತ್ತು. ಹಾಲಿ ಅವಧಿ ಸೆ.27ಕ್ಕೆ ಮುಕ್ತಾಯವಾಗಲಿತ್ತು.

Advertisement

Udayavani is now on Telegram. Click here to join our channel and stay updated with the latest news.

Next