Advertisement

ಸಮಾಜಮುಖಿ ಕಾರ್ಯ ದೇಶಕ್ಕೆ ವಿಸ್ತರಣೆ: ಡಾ|ವೀರೇಂದ್ರ ಹೆಗ್ಗಡೆ

11:12 PM Jul 07, 2022 | Team Udayavani |

ಕನಕಪುರ: ಈ ದೇಶದ ಪ್ರಧಾನಿಗಳು ನಮ್ಮ ಸೇವಾ ಕ್ಷೇತ್ರವನ್ನು ಗುರುತಿಸಿ ಮೆಚ್ಚಿಕೊಂಡಿದ್ದಾರೆ. ಇನ್ನು ಮುಂದೆ ನಮ್ಮ ಸಮಾಜಮುಖಿ ಕಾರ್ಯಕ್ರಮಗಳನ್ನು ದೇಶವ್ಯಾಪಿ ವಿಸ್ತರಿಸುತ್ತೇವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರು ತಿಳಿಸಿದರು.

Advertisement

ಬೆಂಗಳೂರು ಹಾಲು ಒಕ್ಕೂಟದ ವತಿಯಿಂದ ತಾಲೂಕಿನ ಶಿವನಹಳ್ಳಿ ಬಳಿ ನಂದಿನಿ ಹಾಲು ಉತ್ಪನ್ನ ಸಂಕೀರ್ಣದ ಆವರಣದಲ್ಲಿ  ತಮಗೆ ಹಮ್ಮಿಕೊಂಡಿದ್ದ  ಗುರುವಂದನೆ  ಕಾರ್ಯಕ್ರಮಕ್ಕೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಸಭೆಗೆ ನಾಮನಿರ್ದೇಶಿತನಾಗುತ್ತೇನೆ ಎಂಬ ಕಲ್ಪನೆಯೂ ನನಗಿರಲಿಲ್ಲ. ನಾನು ಅದರ ಹಿಂದೆ ಹೋಗುವವನೂ ಅಲ್ಲ.  ಇದು ತಾನಾಗಿಯೇ ಒಲಿದು ಬಂದಿದೆ ಎಂದರು.

ರಾಜ್ಯ ಸಭೆಗೆ ನಾಮನಿರ್ದೇಶಿ ತನಾದ ಬಗ್ಗೆ ಬುಧವಾರ  ರಾತ್ರಿವರೆಗೂ ನನಗೆ ಮಾಹಿತಿ ಇರಲಿಲ್ಲ. ಸ್ವತಃ ಪ್ರಧಾನಿಯೇ ಟ್ವೀಟ್‌ ಮಾಡುವ ಮೂಲಕ ನಮಗೆ ತಿಳಿಸಿದ್ದಾರೆ. ಆ ಬಳಿಕ  ಅಭಿನಂದನೆಯ ಮಹಾಪೂರ ಹರಿದು ಬಂದಿದೆ ಹಾಗೂ ನಮ್ಮ ಜನತೆ ಬಹಳ ಸಂತೋಷಪಟ್ಟಿದ್ದಾರೆ. ನನಗೆ ಯಾವುದೇ ರಾಜಕೀಯ ಆಸಕ್ತಿ ಇಲ್ಲ. ಮಂಜುನಾಥ ಸ್ವಾಮಿಯ ಹೆಗ್ಗಡೆಯ ಪೀಠಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದರು.

ಈ ದೇಶದ ಪ್ರಧಾನಿಗಳಿಗೆ ಸೂಕ್ಷ್ಮವಾಗಿ ಗಮನಿಸುವ ಶಕ್ತಿ ಇರುವುದರ ಬಗ್ಗೆ ಯೋಚಿಸುತ್ತಿದ್ದೇನೆ. ಮೋದಿಯವರು ಬಹಳ ಸೂಕ್ಷ್ಮತೆ ಮತ್ತು ನೆನಪು ಉಳ್ಳವರು. ಹಾಗಾಗಿ ನಮ್ಮ ಕಾರ್ಯಕ್ಷೇತ್ರ ಪ್ರಧಾನಿಯವರ ಗಮನ ಸೆಳೆದಿದೆ. ನಾವು  ಒತ್ತಡದಿಂದಿದ್ದಾಗ ಹೆಚ್ಚಿನ ಕಾರ್ಯ ಮಾಡಬಹುದು. ನಾನು ರಾಜಕೀಯರಹಿತವಾಗಿ ಹಿರಿಯ ಸದಸ್ಯರ ಕೂಟ ಎಂದು ಸೇರಿಕೊಂಡಿದ್ದೇನೆ ಎಂದರು.

ಹೈನುಗಾರಿಕೆಯಲ್ಲಿ ದೇಶದ ಸಾಧನೆ ಅದ್ಬುತ :

Advertisement

6 ದಶಕಗಳ ಹಿಂದೆ  ಹಾವಾಡಿಗರ ದೇಶ ಎಂದು ಕರೆಯಲ್ಪಡುತ್ತಿದ್ದ ಭಾತರ  ಇಂದು ಹೈನುಗಾರಿಕೆಯಲ್ಲಿ ಅದ್ಬುತ ಸಾಧನೆ ಮಾಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ತಿಳಿಸಿದರು.

ನಮ್ಮ ದೇಶದಲ್ಲಿ ಗೋವುಗಳನ್ನು ದೇವರು ಎಂದೇ ಪೂಜಿಸುತ್ತೇವೆ. ರೈತರು ಯಾವುದೇ ಕೃಷಿ ಬೆಳೆಗಳಿಂದ ಆದಾಯ ಕಾಣಬೇಕಾದರೆ, ಕನಿಷ್ಠ 6 ತಿಂಗಳಿಂದ 1 ವರ್ಷ ಕಾಯಬೇಕು. ಆದರೆ, ಹೈನುಗಾರಿಕೆ ಆಗಲ್ಲ. ಹೈನುಗಾರಿಕೆಯಿಂದ ರೈತರಿಗೆ ಬಹಳ ಅನುಕೂಲವಾಗಿದ್ದು, ಲಾಭದಾಯಕವಾಗಿದೆ ಎಂದರು.

ಕಸಾಯಿ ಖಾನೆಗೆ ಬಿಡಬೇಡಿ :

ದೈವ ಸ್ವರೂಪಿಯಾದ ಗೋವುಗಳನ್ನು ವಯಸ್ಸಾದಾಗ ಕಸಾಯಿ ಖಾನೆಗೆ ನೀಡುವ ಬದಲು ಗೋ ಶಾಲೆಗಳಿಗೆ ಕೊಡಬೇಕು. ದೇಸಿ ತಳಿಯ ಗೋವುಗಳನ್ನು ಸಂರಕ್ಷಣೆ ಮಾಡಲೇಬೇಕಾಗಿದೆ. ರೈತರು ಹೆಚ್ಚು ದೇಸಿ ತಳಿಯ ಹಸುಗಳನ್ನು ಸಾಕಾಣಿಕೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಹೇಳಿದರು.

ಧರ್ಮಸ್ಥಳದ ದರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭೆಗೆ ಆಯ್ಕೆಯಾಗಿರುವುದು ಕರ್ನಾಟಕ ಹಾಗೂ ಕನ್ನಡಿಗರಿಗೆ ಹೆಮ್ಮೆ ತಂದಿದೆ.ಹೆಗ್ಗಡೆಯವರು ಮೊದಲಿನಿಂದಲೂ ಗ್ರಾಮೀಣ ಬದುಕಿನಲ್ಲಿ ಬೆಳೆದವರು. ಅವರು ಗ್ರಾಮೀಣ ಭಾಗದ ಮಹಿಳೆಯರ ಮನದಲ್ಲಿದ್ದಾರೆ. ಅವರನ್ನು ಆಯ್ಕೆ ಮಾಡಿದುದಕ್ಕಾಗಿ ರಾಷ್ಟ್ರಪತಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ .ಡಿ.ಕೆ.ಸುರೇಶ್‌, ಸಂಸದ  

Advertisement

Udayavani is now on Telegram. Click here to join our channel and stay updated with the latest news.

Next