Advertisement

ಮೈತ್ರಿ ತಿಕ್ಕಾಟ ಹೊರಟ್ಟಿಯಿಂದ ಅಭಿವ್ಯಕ್ತ: ಬೊಮ್ಮಾಯಿ

11:42 PM May 18, 2019 | Lakshmi GovindaRaj |

ಹುಬ್ಬಳ್ಳಿ: ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ಮೈತ್ರಿ ಸರ್ಕಾರ ಸುಗಮವಾಗಿ ನಡೆಯುತ್ತಿಲ್ಲ ಎಂಬುದನ್ನು ತಮ್ಮ ಹೇಳಿಕೆ ಮೂಲಕ ಹೊರಹಾಕಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರು ಮೈತ್ರಿ ಸರ್ಕಾರದಲ್ಲಿ ಕಚ್ಚಾಟವಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಬಸವರಾಜ ಹೊರಟ್ಟಿಯವರು ವಿಧಾನಸಭೆ ವಿಸರ್ಜಿಸುವುದು ಸೂಕ್ತ ಎಂದು ಹೇಳುವ ಮೂಲಕ ತಾವೊಬ್ಬ ನೇರ ಹಾಗೂ ನಿಷ್ಠುರವಾದಿ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಹೊರಟ್ಟಿ ಹೇಳಿಕೆ ಮೈತ್ರಿ ಸರ್ಕಾರದಲ್ಲಿನ ಆಂತರಿಕ ಬೇಗುದಿಯನ್ನು ತೋರುತ್ತದೆ. ನಾವು ಲೋಕಸಭೆ ಫ‌ಲಿತಾಂಶದ ನಂತರ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆ ನಡೆಯುತ್ತದೆ ಎಂದು ಹೇಳಿದ್ದೆವು. ಆದರೆ, ಇದೀಗ ಫ‌ಲಿತಾಂಶಕ್ಕೂ ಮೊದಲೇ ಬೆಳವಣಿಗೆ ಹೊರ ಬಿದ್ದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next