Advertisement

AIADMK; ಸರ್ವಾಧಿಕಾರಿ…: ಪಳನಿ ಸ್ವಾಮಿ ವಿರುದ್ಧ ಪನ್ನೀರಸೆಲ್ವಂ ಕಿಡಿ

07:29 PM Feb 05, 2024 | |

ಮಧುರೈ(ತಮಿಳುನಾಡು) : ಸರ್ವಾಧಿಕಾರಿ ಎಡಪ್ಪಾಡಿ ಪಳನಿ ಸ್ವಾಮಿ ಬೋಗಸ್ ಮಹಾಸಭೆ ನಡೆಸಿ ಎಂಜಿಆರ್ ಅವರು ಎಐಎಡಿಎಂಕೆಯಲ್ಲಿ ತಂದಿದ್ದ ಪಕ್ಷದ ಬೈಲಾಗಳನ್ನು ತುಳಿದಿದ್ದಾರೆ ಎಂದು ಮಾಜಿ ಸಿಎಂ ಎಐಎಡಿಎಂಕೆ ಉಚ್ಚಾಟಿತ ನಾಯಕ, ಮಾಜಿ ಸಿಎಂ ಓ.ಪನ್ನೀರಸೆಲ್ವಂ ಅವರು ಸೋಮವಾರ ಕಿಡಿ ಕಾರಿದ್ದಾರೆ.

Advertisement

ಸಭೆಯಲ್ಲಿ ಮಾತನಾಡಿದ ಪನ್ನೀರಸೆಲ್ವಂ “1972ರಲ್ಲಿ ಎಂಜಿಆರ್ ಅವರು ಎಐಎಡಿಎಂಕೆಯನ್ನು ರಚಿಸಿದಾಗ, ಪಕ್ಷದ ಕೆಲವು ನಿಯಮಗಳು ಕಾಲಕ್ಕೆ ತಕ್ಕಂತೆ ಬದಲಾಗಬಹುದು ಎಂಬುದೂ ಸೇರಿದಂತೆ ಹಲವು ಉಪ-ಕಾನೂನುಗಳನ್ನು ರಚಿಸಿದ್ದರು. ಆದರೆ ಎಂಜಿಆರ್ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಕಾರ್ಯಕರ್ತರೇ ಆಯ್ಕೆ ಮಾಡಬೇಕು ಎಂದು ಆದೇಶ ಹೊರಡಿಸಿ ತಿದ್ದುಪಡಿ ಮಾಡದ  ಉಪ ಕಾನೂನು ಉಳ್ಳ ಪಕ್ಷವನ್ನು ರಚಿಸಿದರು. ಸರ್ವಾಧಿಕಾರಿ ಎಡಪ್ಪಾಡಿ ಪಳನಿ ಸ್ವಾಮಿ ಬೋಗಸ್ ಮಹಾಸಭೆ ನಡೆಸಿ ಎಂಜಿಆರ್ ತಂದಿದ್ದ ಪಕ್ಷದ ಬೈಲಾಗಳನ್ನು ತುಳಿದಿದ್ದಾರೆ ಎಂದು ಕಿಡಿ ಕಾರಿದರು.

ಎಡಪ್ಪಾಡಿ ಪಳನಿಸ್ವಾಮಿ ಎಐಎಡಿಎಂಕೆ ಕಾರ್ಯಕರ್ತರಿಗೆ ನೀಡಿರುವ ಹಕ್ಕುಗಳನ್ನು ಉಲ್ಲಂಘಿಸುವ ಮೂಲಕ ಹಣ ಉಳ್ಳವರು ಮಾತ್ರ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಬಹುದು ಎಂದು ಮಾಡಿ ತೋರಿಸಿದ್ದಾರೆ. ಕಾರ್ಯಕರ್ತರ ಹಕ್ಕನ್ನು ಕಸಿದುಕೊಂಡ ಎಡಪ್ಪಾಡಿ ಪಳನಿಸ್ವಾಮಿ ಅವರು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಬಹುದೇ? ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next