Advertisement

CM, DCM ಸಲಹೆಗಾರರು ಸೇರಿ ಮತ್ತಷ್ಟು ಹುದ್ದೆಗಳಿಗೆ ಲಾಭದಿಂದ ವಿನಾಯಿತಿ

01:13 AM Feb 24, 2024 | Team Udayavani |

ಬೆಂಗಳೂರು: ಇತ್ತೀಚೆಗಷ್ಟೇ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಕಾನೂನು ಸಲಹೆಗಾರ ಹಾಗೂ ದಿಲ್ಲಿ ವಿಶೇಷ ಪ್ರತಿನಿಧಿಗಳನ್ನು ಲಾಭದಾಯಕ ಹುದ್ದೆಯಿಂದ ಹೊರಗಿಟ್ಟಿದ್ದ ಸರಕಾರವು ಈಗ ಆಯೋಗಗಳ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕ, ಸಿಎಂ ಮತ್ತು ಡಿಸಿಎಂ ಅವರ ಸಲಹೆಗಾರರು, ಕರ್ನಾಟಕ ರಾಜ್ಯ ಪರಿವರ್ತನ ಸಂಸ್ಥೆಯ ಉಪಾಧ್ಯಕ್ಷರನ್ನೂ ಲಾಭ ದಾಯಕ ಹುದ್ದೆಯಿಂದ ಹೊರಗಿಡಲು ಸಿದ್ಧವಾಗಿದೆ. ಈ ಕುರಿತ ಮಸೂದೆಗೆ ವಿಧಾನಸಭೆ ಅಸ್ತು ಎಂದಿದೆ.

Advertisement

ಕೇಂದ್ರ ಸರಕಾರದ ವಿರುದ್ಧ ರಾಜ್ಯ ಸರಕಾರ ಕೈಗೊಂಡ ನಿರ್ಣಯದ ವಿರುದ್ಧ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ಧರಣಿ ನಡೆಸುತ್ತಿರು ವಾಗಲೇ ಕರ್ನಾಟಕ ವಿಧಾನಮಂಡಲ (ಅನರ್ಹತೆ ನಿವಾರಣ) (ತಿದ್ದುಪಡಿ) ಮಸೂದೆ-2024ನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಅನು ಮೋದನೆ ಪಡೆದುಕೊಂಡರು.

ಹಿಂದೆಯೂ ತಿದ್ದುಪಡಿ
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಶಾಸಕ ಎ.ಎಸ್‌. ಪೊನ್ನಣ್ಣ, ದಿಲ್ಲಿ ವಿಶೇಷ ಪ್ರತಿನಿಧಿ ಶಿರಾ ಶಾಸಕ ಟಿ.ಬಿ. ಜಯಚಂದ್ರ ಅವರಿಗಾಗಿ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಈಗ ಸೊಸೈಟಿಗಳ ನೋಂದಣಿಗೆ ಸಂಬಂಧಿಸಿದ ಯಾವುದೇ ಇತರ ಕಾನೂನಿನಡಿ ನೋಂದಾಯಿಸಿದ ಸೊಸೈಟಿ, ಸಮಿತಿ, ಆಯೋಗಗಳ ಅಧ್ಯಕ್ಷ, ಉಪಾಧ್ಯಕ್ಷ, ಆಡಳಿತ ಮಂಡಳಿ ನಿರ್ದೇಶಕರಿಗೂ ವಿನಾಯಿತಿ ನೀಡಲಾಗಿದೆ.

ಜತೆಗೆ ಮುಖ್ಯಮಂತ್ರಿಗಳ ಸಲಹೆಗಾರರು ಹಾಗೂ ಉಪಮುಖ್ಯಮಂತ್ರಿಗಳ ಸಲಹೆಗಾರರಿಗೂ ಈ ವಿನಾಯಿತಿ ಅನ್ವಯ ಆಗಲಿದ್ದು, ಕರ್ನಾಟಕ ರಾಜ್ಯ ಪರಿವರ್ತನ ಸಂಸ್ಥೆಯ ಉಪಾಧ್ಯಕ್ಷ ಪ್ರೊ| ರಾಜೀವಗೌಡ ಅವರನ್ನೂ ಇದರಡಿ ತರಲಾಗಿದೆ. ಲಾಭದಾಯಕ ಹುದ್ದೆ ಹೊಂದಿರುವ ಆರೋಪ ದಡಿ ಅನರ್ಹತೆಯ ಸಂಕಷ್ಟ ಎದುರಾಗದಂತೆ ರಕ್ಷಣೆ ನೀಡಲು ಈ ತಿದ್ದುಪಡಿ ನೆರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next