Advertisement

ಪ್ರಗತಿ ಪಥಕ್ಕೆ ಮತ್ತಷ್ಟು ಕಾಸು : ಹೆದ್ದಾರಿ ಸಂಪರ್ಕ ಜಾಲಕ್ಕೆ ವಿಶೇಷ ಒತ್ತು

12:08 AM Feb 02, 2021 | Team Udayavani |

ಬಜೆಟ್‌ನಲ್ಲಿ ಮೂಲ ಸೌಕರ್ಯಗಳಿಗಾಗಿ ದೇಶಾದ್ಯಂತ ಹೆದ್ದಾರಿ ಸಂಪರ್ಕ ಜಾಲಕ್ಕೆ ವಿಶೇಷ ಒತ್ತು, ವ್ಯಾಪಾರಿ ಹಡಗುಗಳ ಉತ್ತೇಜನಕ್ಕೆ ಯೋಜನೆ, “ಉಜ್ವಲಾ’ ಯೋಜನೆಗೆ ಇನ್ನೂ 1 ಕೋಟಿ ಕುಟುಂಬ ಸೇರ್ಪಡೆ, “ಗ್ರಾಹಕರು ತಮಗಿಷ್ಟದ ವಿದ್ಯುತ್‌ ಪ್ರಸರಣ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಲು ಯೋಜನೆ, ಪ್ರತ್ಯೇಕ “ಅಭಿ ವೃದ್ಧಿ ಹಣಕಾಸು ಸಂಸ್ಥೆ’ ರಚನೆ, “ಬೃಹತ್‌ ಹೂಡಿಕೆಯ ಜವಳಿ ಪಾರ್ಕ್‌’ (ಎಂಐಟಿಆರ್‌ಎ- ಮಿತ್ರ) ಯೋಜನೆ ಜಾರಿ ಮಾಡಿ ವಿಶೇಷ ಅನುದಾನ ಬಿಡುಗಡೆ ಮಾಡಿದೆ.

Advertisement

ದೇಶದ ಪ್ರಗತಿ ಜತೆಗೆ ಆರ್ಥಿಕತೆಗೆ ಬೆಳವಣಿಗೆ ಸಾರಿಗೆ- ಸಂಪರ್ಕ ಮೂಲ ಸೌಕರ್ಯ ಅಭಿವೃದ್ಧಿಯ ಮಹತ್ವವನ್ನು ಮನಗಂಡಿರುವ ಕೇಂದ್ರ ಸರ್ಕಾರ ಈ ಬಾರಿ ರಸ್ತೆ, ರೈಲು ಹಾಗೂ ಬಂದರು ಸಂಪರ್ಕ ಜಾಲ ನಿರ್ಮಾಣ, ಅಭಿವೃದ್ಧಿಗೆ ದೊಡ್ಡ ಮೊತ್ತದ ಅನುದಾನ ಘೋಷಿಸಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ನಿರ್ಮಾಣಕ್ಕಾಗಿ 1.18 ಲಕ್ಷ ಕೋಟಿ ರೂ. ಅನುದಾನ ಕಾಯ್ದಿರಿಸುವ ಮೂಲಕ ಇತಿಹಾಸದಲ್ಲೇ ಅತಿ ಹೆಚ್ಚು ಹಣ ಮೀಸಲಿಟ್ಟಂತಾಗಿದೆ.

ದೇಶಾದ್ಯಂತ ಹೆದ್ದಾರಿ ಸಂಪರ್ಕ ಜಾಲಕ್ಕೆ ವಿಶೇಷ ಒತ್ತು ನೀಡಲಾಗಿದೆ. “ಭಾರತ ಮಾಲಾ ಪರಿಯೋಜನೆ’ಯಡಿ ಒಟ್ಟು 5.35 ಲಕ್ಷ ಕೋಟಿ ರೂ. ವೆಚ್ಚದಲ್ಲಿ 13,000 ಕಿ.ಮೀ. ಉದ್ದದ ಹೆದ್ದಾರಿ ನಿರ್ಮಾಣಕ್ಕೆ ಹಿಂದೆಯೇ ಚಾಲನೆ ದೊರಕಿದ್ದು, ಈವರೆಗೆ 3,800 ಕಿ.ಮೀ. ಉದ್ದದ ಮಾರ್ಗ ನಿರ್ಮಾಣಗೊಂಡಿದೆ. 2022ರ ಮಾರ್ಚ್‌ನೊಳಗೆ 8,500 ಕಿ.ಮೀ. ಉದ್ದದ ಮಾರ್ಗ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದ್ದಾರೆ.

ಇದನ್ನೂ ಓದಿ:ಆರೋಗ್ಯಾಧಾರ ಸ್ತಂಭ: ಕೋವಿಡ್ ಕಲಿಸಿದ ಪಾಠ

ತಮಿಳುನಾಡಿನಲ್ಲಿ ಮಧುರೈ- ಕೊಲ್ಲಂ ಕಾರಿಡಾರ್‌, ಚಿತ್ತೂರು- ತಟೂcರ್‌ ಕಾರಿಡಾರ್‌ ಸೇರಿದಂತೆ ಒಟ್ಟು 1.03 ಲಕ್ಷ ಕೋಟಿ ರೂ. ವೆಚ್ಚದಲ್ಲಿ 3,500 ಕಿ.ಮೀ. ಉದ್ದದ ಹೆದ್ದಾರಿ ಕಾಮಗಾರಿಯನ್ನು ಘೋಷಿಸಿದ್ದು, ಮುಂದಿನ ವರ್ಷ ಅಂದರೆ 2022-23ನೇ ಸಾಲಿನಲ್ಲಿ ಇವು ಕಾರ್ಯಾರಂಭವಾಗಲಿವೆ.

Advertisement

ನೆರೆಯ ಕೇರಳ ರಾಜ್ಯದಲ್ಲಿ ಮುಂಬೈ- ಕನ್ಯಾಕುಮಾರಿ ಕಾರಿಡಾರ್‌ನಡಿ 600 ಕಿ.ಮೀ. ಉದ್ದದ ಹೆದ್ದಾರಿ ಸೇರಿದಂತೆ ಒಟ್ಟು 65,000 ಕೋಟಿ ರೂ. ವೆಚ್ಚದಲ್ಲಿ 1,100 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ. ಪಶ್ಚಿಮ ಬಂಗಾಳದಲ್ಲಿ ಕೊಲ್ಕತ್ತಾ- ಸಿಲಿಗುರಿ ಹೆದ್ದಾರಿ ಮೇಲ್ದರ್ಜೆ ಕಾಮಗಾರಿ ಸೇರಿದಂತೆ 675 ಕಿ.ಮೀ. ಉದ್ದದ ಹೆದ್ದಾರಿ ನಿರ್ಮಾಣಕ್ಕಾಗಿ 25,000 ಕೋಟಿ ರೂ. ಅನುದಾನ ಘೋಷಿಸ ಲಾಗಿದೆ. ಅಸ್ಸಾಂನಲ್ಲಿ ಪ್ರಗತಿ ಯಲ್ಲಿರುವ ಹೆದ್ದಾರಿ ಕಾಮಗಾರಿ ಗಳಿಗೆ 19,000 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ 1,300 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವನ್ನು 34,000 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳುವ ಭರವಸೆ ನೀಡಲಾಗಿದೆ.

2021-22ರಲ್ಲಿ ಕಾಮಗಾರಿಗೆ ಚಾಲನೆ
– ದೆಹಲಿ- ಮುಂಬೈ ಎಕ್ಸ್‌ಪ್ರೆಸ್‌ ವೇ: 260 ಕಿ.ಮೀ. ಉದ್ದದ ಕಾಮಗಾರಿಗೆ ಎರಡು ತಿಂಗಳಲ್ಲಿ ಮಂಜೂರಾತಿ
– ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್‌ ವೇ: 278 ಕಿ.ಮೀ. ಉದ್ದದ ಮಾರ್ಗ ನಿರ್ಮಾಣಕ್ಕೆ ಚಾಲನೆ
– ದೆಹಲಿ- ಡೆಹ್ರಡೂನ್‌ ಎಕನಾಮಿಕ್‌ ಕಾರಿಡಾರ್‌: 210 ಕಿ.ಮೀ. ಉದ್ದದ ಕಾರಿಡಾರ್‌ಗೆ ಹಸಿರು ನಿಶಾನೆ
– ಕಾನ್ಪುರ- ಲಕ್ನೋ ಎಕ್ಸ್‌ಪ್ರೆಸ್‌ ವೇ: ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 27ಕ್ಕೆ ಪರ್ಯಾಯವಾಗಿ 63 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್‌ ನಿರ್ಮಾಣ ಕಾರ್ಯ ಚಾಲನೆ
– ಚೆನ್ನೆ- ಸೇಲಂ ಕಾರಿಡಾರ್‌: 277 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್‌ ಮಾರ್ಗಕ್ಕೆ ಮಂಜೂರಾತಿ- ನಿರ್ಮಾಣಕ್ಕೆ ಚಾಲನೆ
– ರಾಯಪುರ- ವಿಶಾಖಪಟ್ಟಣಂ: ಛತ್ತೀಸ್‌ಗಡ, ಒಡಿಶಾ ಹಾಗೂ ಉತ್ತಮ ಆಂಧ್ರ ಪ್ರದೇಶದಲ್ಲಿ ಹಾದು ಹೋಗುವ 464 ಕಿ.ಮೀ. ಉದ್ದದ ಮಾರ್ಗ ನಿರ್ಮಾಣ ಕಾರ್ಯಾರಂಭ.

Advertisement

Udayavani is now on Telegram. Click here to join our channel and stay updated with the latest news.

Next