Advertisement

ಅಬಕಾರಿ ಅಕ್ರಮ: 9 ಗಂಟೆ ದಿಲ್ಲಿ CM ಕೇಜ್ರಿವಾಲ್‌ ವಿಚಾರಣೆ

09:14 PM Apr 16, 2023 | Team Udayavani |

ನವದೆಹಲಿ:ದೆಹಲಿಯ ಅಬಕಾರಿ ನೀತಿ ಅಕ್ರಮಕ್ಕೆ ಸಂಬಂಧಿಸಿದಂತೆ ಆಮ್‌ ಆದ್ಮಿ ಪಕ್ಷದ ಸಂಚಾಲಕ ಮತ್ತು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರನ್ನು ಸಿಬಿಐ ಭಾನುವಾರ ಒಂಭತ್ತು ಗಂಟೆಗಳ ವಿಚಾರಣೆ ನಡೆಸಿದೆ. ರಾತ್ರಿ 8.30ಕ್ಕೆ ನಿಮಿಷಕ್ಕೆ ವಿಚಾರಣೆ ಮುಗಿಸಿ ಹೊರಬಂದು ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳತ್ತ ಕೈ ಬೀಸಿದ್ದಾರೆ. ಪತ್ರಕರ್ತರು ಅವರ ಪ್ರತಿಕ್ರಿಯೆಗೆ ಬಯಸಿದರೂ, ಅವರು ಮಾತನಾಡದೆ ತೆರಳಿದರು.

Advertisement

ಬೆಳಗ್ಗೆ 11 ಗಂಟೆಗೆ ಆಗಮಿಸಿದ ಅವರನ್ನು ಸಿಬಿಐನ ಪ್ರಧಾನ ಕಚೇರಿಯಲ್ಲಿ ಇರುವ ಭ್ರಷ್ಟಾಚಾರ ನಿಗ್ರಹ ವಿಭಾಗಕ್ಕೆ ಕರೆದೊಯ್ಯಲಾಯಿತು. ತನಿಖಾ ಸಂಸ್ಥೆಯ ಕಚೇರಿಯಲ್ಲಿಯೇ ಅವರಿಗೆ ಮಧ್ಯಾಹ್ನದ ಊಟವನ್ನು ನೀಡಲಾಗಿತ್ತು.

ವಿಚಾರಣೆ ಪ್ರಗತಿಯಲ್ಲಿ ಇರುವಂತೆಯೇ ಆಪ್‌ನ ಮುಖಂಡರು ಮತ್ತು ಕಾರ್ಯಕರ್ತರು ನವದೆಹಲಿಯಲ್ಲಿ ತುರ್ತು ಸಭೆ ನಡೆಸಿದ್ದರು. ಕೇಜ್ರಿವಾಲ್‌ ಅವರನ್ನು ಸಿಬಿಐ ಬಂಧಿಸಲಿದೆ ಎಂಬ ಆತಂಕವನ್ನೂ ಪಕ್ಷದ ನಾಯಕ ಗೋಪಾಲ್‌ ರಾಯ್‌ ವ್ಯಕ್ತಪಡಿಸಿದ್ದರು. ದೆಹಲಿ ಮುಖ್ಯಮಂತ್ರಿ ವಿಚಾರಣೆ ಖಂಡಿಸಿ ಪ್ರತಿಭಟನೆ ನಡೆಸಿದ ಆಪ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಬಿಡುಗಡೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next