Advertisement

ಕೌಟುಂಬಿಕ ಕಲಹ: ಅಬಕಾರಿ ಇಲಾಖೆ ಪಿಎಸ್ಐ ಆತ್ಮಹತ್ಯೆ

10:11 AM Feb 24, 2020 | keerthan |

ಬೀದರ್: ಕೌಟುಂಬಿಕ ಕಲಹದಿಂದ ಬೇಸತ್ತು ಬಸವಕಲ್ಯಾಣ ಅಬಕಾರಿ ಇಲಾಖೆಯ ಪ್ರೊಬೇಷನರಿ ಪಿಎಸ್ಐ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ನಡೆದಿದೆ.

Advertisement

ರೇಖಾ ಕರಣಕುಮಾರ ಕೋರಿ (29) ಆತ್ಮಹತ್ಯೆಗೆ ಶರಣಾದ ಅಬಕಾರಿ ಇಲಾಖೆಯ ಪಿಎಸ್ಐ.

ಕಡಗಂಚಿ ಮೂಲದವರಾಗಿರುವ ರೇಖಾ ಅವರು ಬಸವಕಲ್ಯಾಣದ ಶಿವಪೂರ ರಸ್ತೆಯಲ್ಲಿ ಇರುವ ಸಂಜುಕುಮಾರ ನಾಗರಾಳೆ ಅವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ರವಿವಾರ ಮಧ್ಯಾಹ್ನ ಮನೆಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಮೃಪಟ್ಟಿದ್ದಾರೆ.

ಮೃತ ರೇಖಾ ಅವರಿಗೆ ಕೌಶಿಕ್ (7)  ಮತ್ತು ಕರಿಧಾಂತ (1 ವರ್ಷ 5 ತಿಂಗಳು) ಇಬ್ಬರು ಗಂಡು ಮಕ್ಕಳಿದ್ದಾರೆ. ರೇಖಾ ಅವರು 7-8 ತಿಂಗಳಿನಿಂದ ಬಸವಕಲ್ಯಾಣ ಅಬಕಾರಿ ಇಲಾಖೆಯಲ್ಲಿ ಪಿ.ಎಸ್.ಐ ಅಂತ ಕತ೯ವ್ಯ ನಿವ೯ಹಿಸುತ್ತಿದ್ದರು. ಸದ್ಯ ಮೃತದೇಹವು ಬಸವಕಲ್ಯಾಣ ನಗರದ ಪಾಟೀಲ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿದ್ದು ತನಿಖೆ ಆರಂಭಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next