Advertisement

Karnataka ಸಮಸ್ಯೆಗಳನ್ನು ನೆನೆದು ಮಾಜಿ ಪ್ರಧಾನಿ ದೇವೇಗೌಡರು ಭಾವುಕ

09:47 PM Aug 27, 2023 | Team Udayavani |

ಬೆಂಗಳೂರು: ನನಗೀಗ 91 ವರ್ಷ. ನಾಡಿನ ಜ್ವಲಂತ ಸಮಸ್ಯೆಗಳನ್ನು ನೋಡಿದಾಗ ನನ್ನ ಮನಸಿಗೆ ನೋವಾಗುತ್ತದೆ. ಸೋಮವಾರ ನಾಡಿನ ಜ್ವಲಂತ ಸಮಸ್ಯೆಗಳನ್ನ ಬಿಚ್ಚುಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್. .ಡಿ.ದೇವೇಗೌಡ ಭಾನುವಾರ ಭಾವುಕರಾಗಿದ್ದಾರೆ.

Advertisement

ಕನ್ನಡಿಗರ ಕನ್ನಡ ಕೂಟ,ದುಬಾಯಿ,ಯುಎಇ ಭಾನುವಾರ ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುವೆ ವೇಳೆ ಕೆಲ ಕ್ಷಣ ಭಾವುಕರಾದರು.

ನನಗೆ ಈ ಇಳಿಯ ವಯಸ್ಸಿನಲ್ಲಿ ನಾಡಿನ ಸಮಸ್ಯೆಯ ಬಗ್ಗೆ ಅರಿವಿದೆ. ರಾಜ್ಯದಲ್ಲಿ ಏನೇನು ಸಮಸ್ಯೆಗಳು ಇವೆ ಎಂಬುದು ಗೊತ್ತಿದೆ. ಸೋಮವಾರ ಬೆಳಗ್ಗೆ ಅವುಗಳ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ತೆರೆದಿದುಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next