Advertisement

ರಾಜ್ಯಸಭೆಗೆ ನಿವೃತ್ತ ನ್ಯಾ|ಗೊಗೊಯ್‌

02:23 AM Mar 17, 2020 | Team Udayavani |

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯ ಮೂರ್ತಿ ರಂಜನ್‌ ಗೊಗೊಯ್‌ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯ ಮೂರ್ತಿಯೊಬ್ಬರನ್ನು ರಾಜ್ಯಸಭೆಗೆ ನೇಮಕ ಮಾಡಿರುವುದು ಇದೇ ಮೊದಲು.

Advertisement

ಕೇಂದ್ರ ಗೃಹ ಖಾತೆಯ ಶಿಫಾರಸಿನ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಈ ಬಗ್ಗೆ ಸೋಮವಾರ ಆದೇಶ ಹೊರಡಿಸಿದ್ದಾರೆ. ಖ್ಯಾತ ನ್ಯಾಯವಾದಿ ಕೆ.ಟಿ.ಎಸ್‌. ತುಳಸಿ ಅವರ ರಾಜ್ಯ ಸಭೆಯ ಸದಸ್ಯತ್ವದ ಅವಧಿ ಮುಕ್ತಾಯಗೊಂಡಿದ್ದರಿಂದ ಒಂದು ಸ್ಥಾನ ತೆರವಾಗಿತ್ತು. 13 ತಿಂಗಳ ಕಾಲ ಸಿಜೆಐ ಆಗಿದ್ದ ನ್ಯಾ| ರಂಜನ್‌ ಗೊಗೊಯ್‌ ಅವರು 2019ರ ನ.9ರಂದು ಐತಿ ಹಾಸಿಕ ಅಯೋಧ್ಯೆ ತೀರ್ಪು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next