Advertisement

ಗೋವಾದಲ್ಲಿ ಬಿಜೆಪಿ ಬೆಂಬಲಿಸಿದ್ದಕ್ಕೆ ಕ್ಷಮೆ: ಜಿ.ಎಫ್.ಪಿ.

01:47 AM Jun 16, 2020 | Hari Prasad |

ಪಣಜಿ: ಮಾಜಿ ಸಿಎಂ ಮನೋಹರ್‌ ಪರಿಕ್ಕರ್‌ ನಿಧನದ ಬಳಿಕ ಗೋವಾದಲ್ಲಿ ಪ್ರಮೋದ್‌ ಸಾವಂತ್‌ ನೇತೃತ್ವದ ಬಿಜೆಪಿ ಸರಕಾರವನ್ನು ಬೆಂಬಲಿಸುವ ಮೂಲಕ ನಾವು ರಾಜಕೀಯವಾಗಿ ದೊಡ್ಡ ತಪ್ಪು ಮಾಡಿದೆವು.

Advertisement

ಇದಕ್ಕಾಗಿ ಗೋವಾ ಜನರ ಬಳಿ ಕ್ಷಮೆ ಕೋರುತ್ತೇನೆ ಎಂದು ಮಾಜಿ ಉಪ ಮುಖ್ಯಮಂತ್ರಿ ವಿಜಯ್‌ ಸರ್ದೇಸಾಯಿ ಹೇಳಿದ್ದಾರೆ.

ಗೋವಾ ಫಾರ್ವರ್ಡ್‌ ಪಾರ್ಟಿ (ಜಿ.ಎಫ್.ಪಿ.) ಮುಖ್ಯಸ್ಥರೂ ಆಗಿರುವ ಸರ್ದೇಸಾಯಿ, ‘ರಾಜ್ಯದಲ್ಲಿ ಬಿಜೆಪಿ ಸರಕಾರ ಅಸಮರ್ಥವಾಗಿದ್ದು, ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ಹೊಂದಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಸರಕಾರವನ್ನು ಅಸ್ತಿತ್ವಕ್ಕೆ ತರುವುದಿಲ್ಲ.

ಬಿಜೆಪಿಗೆ ರಾಜ್ಯದಲ್ಲಿ ಭವಿಷ್ಯವಿಲ್ಲ ಎಂದು ಕಿಡಿಕಾರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ಅತಂತ್ರ ಫ‌ಲಿತಾಂಶ ಸೃಷ್ಟಿಯಾಗಿದ್ದರಿಂದ ಬಿ.ಎಫ್.ಪಿ. ಸೇರಿದಂತೆ ಮತ್ತಿತರರ ಬೆಂಬಲ ಪಡೆದು ಬಿಜೆಪಿ ಸರಕಾರ ರಚಿಸಿತ್ತು.

Advertisement

ಕಳೆದ ಜುಲೈನಲ್ಲಿ ಕಾಂಗ್ರೆಸ್‌ನ 10 ಶಾಸಕರು ಬಿಜೆಪಿಗೆ ಸೇರ್ಪಡೆಯಾದ ನಂತರ ಸರದೇಸಾಯಿ ಸೇರಿದಂತೆ ಬಿ.ಎಫ್.ಪಿ.ಯ ಇಬ್ಬರು ಶಾಸಕರನ್ನು ಸಂಪುಟದಿಂದ ಕೈಬಿಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next