Advertisement

ಇವಿಎಂ ದುರ್ಬಳಕೆ: ಶಾಸಕರಿಗೆ ಹೈ ನೋಟಿಸ್‌

07:00 AM Jul 26, 2018 | Team Udayavani |

ಬೆಂಗಳೂರು: ವಿದ್ಯುನ್ಮಾನ ಮತಯಂತ್ರ (ಇವಿಎಂ) ದುರ್ಬಳಕೆ ಮಾಡಿ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿ ಗೆಲುವು ಸಾಧಿಸಿದ್ದಾರೆಂಬ ಆಕ್ಷೇಪಣೆಗಳೊಂದಿಗೆ ಸಲ್ಲಿಕೆಯಾಗಿರುವ ಪ್ರತ್ಯೇಕ ಚುನಾವಣಾ ತಕರಾರು ಅರ್ಜಿಗಳ ಸಂಬಂಧ ಶಾಸಕರಾದ ಎಸ್‌.ವಿ ರಾಮಚಂದ್ರ(ಜಗಳೂರು ಕ್ಷೇತ್ರ) ಹಾಗೂ ಡಾ.ವೇದವ್ಯಾಸ ಕಾಮತ್‌(ಮಂಗಳೂರು ದಕ್ಷಿಣ) ಅವರಿಗೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

Advertisement

ಶಾಸಕ ಎಸ್‌.ವಿ. ರಾಮಚಂದ್ರ ಅವರ ಶಾಸಕ ಸ್ಥಾನ ಅಸಿಂಧುಗೊಳಿಸುವಂತೆ ಕೋರಿ ಪರಾಜಿತ ಅಭ್ಯರ್ಥಿ ಎಚ್‌.ಪಿ. ರಾಜೇಶ್‌ ಹಾಗೂ ವೇದವ್ಯಾಸ ಕಾಮತ್‌ ಅವರ ಆಯ್ಕೆ ಪ್ರಶ್ನಿಸಿ ಜೆ.ಆರ್‌. ಲೋಬೋ ಚುನಾವಣಾ ತಕರಾರು ಅರ್ಜಿಗಳನ್ನು ಸಲ್ಲಿಸಿದ್ದರು. ಈ ಎರಡೂ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್‌ನ ಎರಡು ಪ್ರತ್ಯೇಕ ನ್ಯಾಯಪೀಠಗಳು, ಪ್ರತಿವಾದಿ ಶಾಸಕರು ಹಾಗೂ ಇನ್ನಿತರರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next