Advertisement

ಜನರ ಭಾವನೆಗೆ ಬೆಲೆ ಕೊಟ್ಟು ರಾಮ ಮಂದಿರ ನಿರ್ಮಿಸಿ

04:20 PM Nov 20, 2018 | Team Udayavani |

ಲಕ್ನೋ: ಸಾರ್ವಜನಿಕರ ಭಾವನೆಯನ್ನು ಗೌರವಿಸಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕು ಎಂದು ಉತ್ತರ ಪ್ರದೇಶದ ಸಂಸ್ಕೃತಿ ಸಚಿವ ಲಕ್ಷ್ಮೀನಾರಾಯಣ ಚೌಧರಿ ಹೇಳಿದ್ದಾರೆ. ದೇಗುಲ ನಿರ್ಮಾಣ ಮಾಡುವ ಮೂಲಕ ಅಯೋಧ್ಯೆಯ ವೈಭವವನ್ನು ಮರಳಿಸಬೇಕಿದೆ. ಸರಕಾರವಾಗಲೀ ಅಥವಾ ದೇಶದ ಯಾವುದೇ ಸಂಸ್ಥೆಯಾಗಲಿ ಎಲ್ಲರೂ ಸಾರ್ವಜನಿಕರ ಭಾವನೆಗೆ ಗೌರವ ನೀಡಬೇಕು. ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಾಣ ಮಾಡಬೇಕು ಎಂಬುದೇ ದೇಶಾದ್ಯಂತ ಸಾರ್ವಜನಿಕರ ಭಾವನೆಯಾಗಿದೆ ಎಂದು ಚೌಧರಿ ಹೇಳಿದ್ದಾರೆ. 

Advertisement

ಈ ಮಧ್ಯೆ ಶಿಯಾ ವಕ್ಫ್ ಬೋರ್ಡ್‌ ಮುಖ್ಯಸ್ಥ ಸೈಯದ್‌ ವಸೀಮ್‌ ರಿಜ್ವಿ ನಿರ್ಮಿಸಿದ ರಾಮ ಜನ್ಮಭೂಮಿ ಎಂಬ ಸಿನಿಮಾದ ಟ್ರೇಲರ್‌ ಅನ್ನು ಬಿಡುಗಡೆ ಮಾಡಲಾಗಿದೆ. 1990ರಲ್ಲಿ ರಾಮ ಮಂದಿರ ಚಳವಳಿಯನ್ನು ಕೇಂದ್ರೀಕರಿಸಿ ಈ ಸಿನಿಮಾ ನಿರ್ಮಿಸಲಾಗಿದೆ. 

ಚುನಾವಣೆ ಗಿಮಿಕ್‌: 2019ರ ಲೋಕಸಭೆ ಚುನಾವಣೆಗೂ ಮುನ್ನ ರಾಮ ಮಂದಿರ ವಿಚಾರವನ್ನು ಪ್ರಸ್ತಾಪಿಸುತ್ತಿರುವ ಬಿಜೆಪಿಯದ್ದು ಚುನಾವಣೆ ಗಿಮಿಕ್‌ ಎಂದು ಸಮಾಜವಾದಿ ಪಕ್ಷ ಟೀಕಿಸಿದೆ. ಎಸ್‌ಪಿ ಮುಖಂಡ  ರಾಜಪಾಲ್‌ ಕಶ್ಯಪ್‌ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಅಭಿವೃದ್ಧಿಯ ಅಜೆಂಡಾ ಬಿಜೆಪಿ ಬಳಿ ಇಲ್ಲ. ಹೀಗಾಗಿ ಕೋರ್ಟಲ್ಲಿರುವ ವಿಷಯ ಕೈಗೆತ್ತಿಕೊಂಡಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next