Advertisement

“ಹಿಟ್ಲರ್‌ ಯಾರಿಗೆ ಸ್ಫೂರ್ತಿ ಎಂದು ಎಲ್ಲರಿಗೂ ಗೊತ್ತು’

07:15 AM Jul 23, 2017 | Team Udayavani |

ಹೊಸದಿಲ್ಲಿ: ಶುಕ್ರವಾರ ಬೆಂಗಳೂರಿನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸುತ್ತಾ “ಹಿಟ್ಲರ್‌’ ಹೆಸರು ಪ್ರಸ್ತಾವಿಸಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಕೇಂದ್ರ ಸಚಿವೆ ಸ್ಮತಿ ಇರಾನಿ ಶನಿವಾರ ತಿರುಗೇಟು ನೀಡಿದ್ದಾರೆ.

Advertisement

ರಾಹುಲ್‌ ಮಾತಿಗೆ ಪ್ರತಿಯಾಗಿ ಸರಣಿ ಟ್ವೀಟ್‌ಗಳನ್ನು ಮಾಡಿರುವ ಇರಾನಿ, “ಹಿಟ್ಲರ್‌ನಿಂದ ಸ್ಫೂರ್ತಿ ಪಡೆದವರು ಯಾರು, ತುರ್ತು ಪರಿಸ್ಥಿತಿ ಹೇರಿದವರು ಯಾರು ಮತ್ತು ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸಿದವರು ಯಾರು ಎಂದು ಗೆಸ್‌ ಮಾಡಿದವರಿಗೆ ಬಹುಮಾನ ಕೊಡುವುದಿಲ್ಲ’ ಎಂದಿ ದ್ದಾರೆ. ಇನ್ನೊಂದು ಟ್ವೀಟ್‌ನಲ್ಲಿ, “ನಿಸ್ತೇಜ ಭವಿಷ್ಯವಿರುವುದು ಕಾಂಗ್ರೆಸ್‌ ಪಕ್ಷಕ್ಕೇ ಹೊರತು, ದೇಶಕ್ಕಲ್ಲ. ನೀವು ಮಾಡುತ್ತಿರುವ ಎಲ್ಲದಕ್ಕೂ ಬಿಜೆಪಿಯದ್ದೊಂದು ಪ್ರಾಮಾಣಿಕ ಥ್ಯಾಂಕ್ಸ್‌’ ಎಂದು ತಿವಿದಿದ್ದಾರೆ. ಶುಕ್ರವಾರ ಮಾತನಾಡಿದ್ದ ರಾಹುಲ್‌, “ವಾಸ್ತವದ ಬಗ್ಗೆ ಸರಿಯಾದ ಅರಿವು ಹೊಂದಿರಿ. ಆಗ ಮಾತ್ರ ನಿಮಗೆ ಬೇಕಾದಾಗ ಅದನ್ನು ಉಸಿರುಗಟ್ಟಿಸಬಹುದು ಎಂದು ಹಿಟ್ಲರ್‌ ಬರೆದಿದ್ದರು. ಈಗ ನಮ್ಮ ದೇಶದಲ್ಲಿ ನಡೆಯುತ್ತಿರುವುದು ಇದೇ. ವಾಸ್ತವದ ಕೊಲೆ’ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next