Advertisement

ಪಕ್ಷದಲ್ಲಿ ಸ್ಥಾನ ಕೇಳಲು ಎಲ್ಲರಿಗೂ ಅಧಿಕಾರವಿದೆ, ಇದರಲ್ಲಿ ರಾಜಕಾರಣವಿಲ್ಲ: ಸಚಿವ ಸೋಮಶೇಖರ್

03:56 PM Jun 02, 2020 | keerthan |

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದೆ. ಬಿಜೆಪಿಗೆ ಒಂಬತ್ತು ಸ್ಥಾನ ಲಭ್ಯವಾಗುತ್ತದೆ. ರಾಜ್ಯಸಭೆ ಎರಡು ಸ್ಥಾನ ಬರುತ್ತದೆ. ಪಕ್ಷಕ್ಕೆ ದುಡಿದವರು, ಶಾಸಕರು ಪಕ್ಷದ ಮುಖಂಡರ ಮೂಲಕ ಒತ್ತಡ ತರುವುದು ಎಲ್ಲಾ ಪಕ್ಷದಲ್ಲೂ ಇದೆ. ಇದರಲ್ಲಿ ರಾಜಕಾರಣವಿಲ್ಲ ಎಂದು ಸಹಕಾರಿ ಸಚಿವ ಸೋಮಶೇಖರ್ ಹೇಳಿದರು.

Advertisement

ಮಂಗಳವಾರ ಚಿಕ್ಕಮಗಳೂರು ನಗರದಲ್ಲಿ ಮಾತನಾಡಿದ ಅವರು, ನಮಗೂ, ಸಿ.ಟಿ.ರವಿಗೂ ಮುಖ್ಯಮಂತ್ರಿಗಳ ಬಳಿ ಕರೆದುಕೊಂಡು ಹೋಗಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿಸಿ ಎಂದು ಫೋನ್ ಬರುತ್ತದೆ. ಹೀಗೆ ಪಕ್ಷದಲ್ಲಿ ಕೇಳಲು ಎಲ್ಲರಿಗೂ ಅಧಿಕಾರವಿದೆ. ಅದಕ್ಕೆ ಅನ್ಯತಾ ಭಾವಿಸುವ ಅವಶ್ಯಕತೆ ಏನಿಲ್ಲ ಎಂದರು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ನಮ್ಮನೆಲ್ಲ ಶಾಸಕರು, ಮಂತ್ರಿ ಮಾಡಿದ್ದಾರೆ. ಆರ್.ಶಂಕರ್, ಎಂಟಿಬಿ ನಾಗರಾಜ್, ವಿಶ್ವನಾಥ  ಅವರಿಗೆ ಅವಕಾಶ ಮಾಡಿಕೊಡುತ್ತಾರೆ.  ಸಿಎಂ ಮಾತಿಗೆ ತಕ್ಕಂತೆ ನಡೆದುಕೊಂಡಿದ್ದಾರೆ. ಎಲ್ಲರಿಗೂ ಅವಕಾಶ ಮಾಡಿಕೊಡುತ್ತಾರೆ. ಮಾತಿಗೆ ತಪ್ಪುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next