Advertisement
ತಾಲೂಕಿನ ದೊಡ್ಡಿಂದವಾಡಿ ಜಿ.ವಿ.ಗೌಡ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸೊಸೈಟಿ ರೋಟರಿ ಮಿಡ್ ಟೌನ್ ಸಂಸ್ಥೆ ಹಾಗೂ ದಿವಂಗತ ಜಿ.ರಾಜೂಗೌಡ ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ದಿ.ಜಿ.ರಾಜೂಗೌಡರ 13ನೇ ವರ್ಷದ ಪುಣ್ಯ ತಿಥಿ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಉಚಿತ ಬೃಹತ್ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಸಂಘ ಅಸ್ತಿತ್ವಕ್ಕೆ: ದಿವಂಗತ ಜಿ. ರಾಜೂಗೌಡರ 13ನೇ ವರ್ಷದ ಪುಣ್ಯತಿಥಿಯ ಅಂಗವಾಗಿ ತಾಲೂಕು ದಿವಂಗತ ಜಿ.ರಾಜೂಗೌಡ ಅಭಿಮಾನಿ ಬಳಗ ಅಸ್ತಿತ್ವಕ್ಕೆ ಬಂದಿದೆ. ಇದರ ಪ್ರಥಮ ದಿನದಂದೆ 500ಕ್ಕೂ ಹೆಚ್ಚು ಜನರು ಸದಸ್ಯತ್ವ ನೋಂದಾಣಿ ಮಾಡಿಸಿಕೊಂಡಿದ್ದು, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಸದಸ್ಯತ್ವ ನೋಂದಣಿ ಮಾಡಿ ನಂತರ ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು ಎಂದು ನರೇಂದ್ರ ಅವರ ಪುತ್ರ ನವನವಿತ್ಗೌಡ ತಿಳಿಸಿದರು.
6 ಹಸುಗಳ ವಿತರಣೆ: ಕಾಮಧೇನು ಯೋಜನಡಿಯಲ್ಲಿ 6 ವಿಧವೆಯರಿಗೆ ಸುಮಾರು 2 ಲಕ್ಷ ರೂ. ವೆಚ್ಚದ 6 ಹಸುಗಳನ್ನು ಬೆಂಗಳೂರಿನ ಹೈಗ್ರೌಂಡ್ ಅಧ್ಯಕ್ಷ ರಾಮಚಂದ್ರ ವಿತರಿಸಿ ಮಾತನಾಡಿ, ಹಸುಗಳು ಕರುಗಳಿಗೆ ಜನ್ಮ ನೀಡಿದಾಗ ಅಂತಹ ಕರುಗಳನ್ನು ಸಂಸ್ಥೆಗೆ ಧಾನವಾಗಿ ನೀಡಿ. ಈ ಕರುಗಳನ್ನು ಬೆಳೆಸಿದ ಬಳಿಕ ಮತ್ತಷ್ಟು ವಿಧವೆಯರಿಗೆ ವಿತರಣೆ ಮಾಡಲಾಗುವುದು. ಇದುವರಗೆ ರಾಜ್ಯಾದ್ಯಂತ 4 ಸಾವಿರ ಹಸುಗಳನ್ನು ವಿಧವೆಯರಿಗೆ ವಿತರಿಸಲಾಗಿದೆ ಎಂದರು.
ಶಿಬಿರದಲ್ಲಿ ರೋಟರಿ ಜಿಲ್ಲಾ ರಾಜ್ಯಪಾಲ ಡಾ.ನಾಗಾರ್ಜುನ್ ಬೆಂಗಳೂರಿನ ಹೈಗ್ರೌಂಡ್ ಕಾರ್ಯದರ್ಶಿ ಅರವಿಂದ ನಾಯ್ಡು, ತಾಪಂ ಅಧ್ಯಕ್ಷ ರಾಜು ಜಿಪಂ ಸದಸ್ಯರಾದ ಶಿವಮ್ಮ, ಮರಗದಮಣಿ, ಲೇಖಾ, ದೊಡ್ಡಿಂದವಾಡಿ ಗ್ರಾಪಂ ಅಧ್ಯಕ್ಷ ಲೊಕೇಶ್, ರೋಟರಿ ಮಿಡ್ ಟೌನ್ ಅಧ್ಯಕ್ಷ ಮಹೇಶ್ ಸೇರಿದಂತೆ ಇತರರು ಇದ್ದರು.