Advertisement

ಈಶ್ವರಪ್ಪ ರಾಜೀನಾಮೆ ಕೊಡಲೇಬೇಕು: ಸಿದ್ದರಾಮಯ್ಯ

08:36 PM Apr 12, 2022 | Team Udayavani |

ಬೆಂಗಳೂರು: ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ರಾಜೀನಾಮೆ ಕೊಡಲೇಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂತೋಷ್‌ ಪಾಟೀಲ್‌ ಈ ರೀತಿ ನೇರ ಆರೋಪ ಮಾಡಿರುವುದು ಡೆತ್‌ ನೋಟ್‌ ಇದ್ದಂತೆ. ಹಿಂದೆ ಪೋಲೀಸ್‌ ಅಧಿಕಾರಿ ಗಣಪತಿ ಅವರ ಪ್ರಕರಣದಲ್ಲಿ ಆಗಿನ ಸಚಿವರಾಗಿದ್ದ ಕೆ.ಜೆ ಜಾರ್ಜ್‌ ಅವರು ರಾಜೀನಾಮೆ ನೀಡಿದ್ದರು. ಈಗ ಈಶ್ವರಪ್ಪ ವಿರುದ್ಧ ಐಪಿಸಿ ಸೆಕ್ಷನ್‌ 300 ಅಡಿಯಲ್ಲಿ ದಾಖಲಾಗಿ, ಐಪಿಸಿ ಸೆಕ್ಷನ್‌ 302 ಅಡಿಯಲ್ಲಿ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಸಂತೋಷ್‌ ಪಾಟೀಲ್‌ ಬಿಜೆಪಿ ಕಾರ್ಯಕರ್ತ. ಇವರು ಗ್ರಾಮೀಣ ಅಭಿವೃದ್ಧಿ ಸಚಿವ ಈಶ್ವರಪ್ಪನವರ ಬಳಿ ರಸ್ತೆ ಕೆಲಸ ಪಡೆದಿದ್ದು, ಕಮೀಷನ್‌ ಕೂಡ ನೀಡಿರುತ್ತಾರೆ. ಈಶ್ವರಪ್ಪನವರು ಹೆಚ್ಚು ಕಮಿಷನ್‌ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಮಾಡಿದ್ದರು. ಈಗ ಸಂತೋಷ್‌ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ವಾಟ್ಸಪ್‌ ಸಂದೇಶದಲ್ಲಿ ತಮ್ಮ ಸಾವಿಗೆ ಸಚಿವ ಈಶ್ವರಪ್ಪನವರೇ ನೇರ ಹೊಣೆ ಎಂದು ಹೇಳಿದ್ದಾರೆ. ಇದಕ್ಕಿಂತ ಬೇರೆ ಏನು ಬೇಕು ಎಂದು ಪ್ರಶ್ನಿಸಿದರು.

ಈಶ್ವರಪ್ಪನವರು ಮಾನಹಾನಿ ಪ್ರಕರಣ ದಾಖಲಿಸಿರುವುದಕ್ಕೂ ಇದಕ್ಕೂ ಸಂಬಂಧವಿಲ್ಲ. ಸತ್ತಿರುವ ವ್ಯಕ್ತಿ ತನ್ನ ಸಾವಿಗೆ ಈಶ್ವರಪ್ಪ ಕಾರಣ, ಅವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ನೇರ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಇದಕ್ಕಿಂತ ದೊಡ್ಡ ಸಾಕ್ಷಿ ಮತ್ತೇನು ಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next